ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ವತಿಯಿಂದ ಬಲಿದಾನ್ ಟ್ರೋಫಿ 2022 ಮಂಗಳೂರು ವಿಭಾಗ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಬಿಸಿರೋಡಿನ ಸರ್ಕಲ್ ಹತ್ತಿರ ಪೆಲತ್ತಿಮಾರ್ ಗಾಣದಪಡ್ಪುನಲ್ಲಿ ಆಯೋಜಿಸಲಾಗಿತ್ತು. ಈ ಕಬಡ್ಡಿ ಪಂದ್ಯಾಟವನ್ನು ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ಅವರು ಉದ್ಘಾಟಿಸಿ ಶುಭಹಾರೈಸಿದರು.ಮಂಗಳೂರು ವಿಭಾಗದಿಂದ ಒಟ್ಟು 32 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಪಡೆಯಿತು, ದ್ವಿತೀಯ ಸ್ಥಾನವನ್ನು ವಿಕಾಸ್ ಕಾಲೇಜು ಪಡೆಯಿತು, ಮೂರನೇ ಸ್ಥಾನವನ್ನು ಪಡೆಯಿತು, ನಾಲ್ಕನೇ ಸ್ಥಾನವನ್ನು ಪಡೆಯಿತು.
ಈ ಕಾರ್ಯಕ್ರಮದಲ್ಲಿ ಎಬಿವಿಪಿಯ ರಾಜ್ಯಕಾರ್ಯದರ್ಶಿಗಳಾದ ಮಣಿಕಂಠ ಕಳಸ, ಮಂಗಳೂರು ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ, ಬಂಟ್ವಾಳ ತಾಲೂಕು ಸಂಚಾಲಕರಾದ ಶಿವಪ್ರಸಾದ್, ನಗರ ಕಾರ್ಯದರ್ಶಿಯಾದ ಪ್ರತೀಕ್ , ಸಿದ್ದಕಟ್ಟೆ ನಗರ ಕಾರ್ಯದರ್ಶಿ ವಿಘ್ನೇಶ್ , ಬಂಟ್ವಾಳ ತಾಲೂಕು ಸಹ ಸಂಚಾಲಕರಾದ ಶಿವಕುಮಾರ್, ನಗರ ವಿದ್ಯಾರ್ಥಿನಿ ಪ್ರಮುಖ್ ಸಮೀಕ್ಷಾ ಕಾರ್ಯಕರ್ತರಾದ ಸುಶಾಂತ್ , ಕೀಶೋರ್, ರಂಜಿತ್, ದೀಪಕ್, ಇಂಚರ, ಶ್ರಾವ್ಯ, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.