ವಿಟ್ಲ: ವಿಟ್ಲ- ಸಾಲೆತ್ತೂರು ನಡುವೆ ಸಂಪರ್ಕ ಕಲ್ಪಿಸುವ ಬಸ್ಸುಗಳ ಸಮಯದ ವಿಚಾರದಲ್ಲಿ ಪೈಪೋಟಿ ತೀವ್ರಗೊಂಡು ಮೂರ್ಕಜೆಯಲ್ಲಿ ಎರಡು ಬಸ್ಸುಗಳ ನಡುವೆ ಅಪಘಾತ ಸಂಭವಿಸಿದೆ.
ವಿಟ್ಲದಿಂದ ಸಾಲುತ್ತೂರು ಕಡೆಗೆ ಹೋಗುವ ಬಸ್ಅಸುಗಳ ಸಮಯದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದೆ, ಪೇಟೆಯ ರಸ್ತೆಯುದ್ದಕ್ಕೂ ನಿಲ್ಲಿಸಿಕೊಂಡು ಬೇರೆ ವಾಹನಗಳ ಸಂಚಾರಕ್ಕೆ ಸಮಸ್ಯೆ ಮಾಡುತ್ತಿರುತ್ತಾರೆ. ಈಗ ಒಂದು ಹಂತ ಮುಂದೆ ಹೋಗಿ ಎರಡು ಬಸ್ಸುಗಳು ಪರಸ್ಪರ ತಿಕ್ಕಾಟ ನಡೆಸಿದ್ದಾರೆ. ಬಸ್ಸುಗಳು ಜಖಂ ಗೊಂಡಿದ್ದು, ಪ್ರಯಾಣಿಕರ ಜೀವದ ಜತೆಗೆ ಆಟವಾಡುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಬಸ್ಸುಗಳನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯ ಬಗ್ಗೆ ಪ್ರಕರಣ ದಾಖಲಾಗಿದೆ.
ಕೆಲವು ವರ್ಷಗಳ ಹಿಂದೆ ಸರ್ಕಾರಿ ಹಾಗೂ ಖಾಸಗೀ ಬಸ್ ನಡುವೆ ಇದ್ದ ತಿಕ್ಕಾಟ ಈಗ ಖಾಸಗೀ ಬಸ್ ನಡುವೆಯೇ ಆರಂಭವಾಗಿದೆ. ಕಳೆದ ಒಂದು ವರ್ಷದಿಂದ ವಿಟ್ಲ-ಸಾಲೆತ್ತೂರು-ಮುಡಿಪು-ಮಂಗಳೂರು ರಸ್ತೆಯಲ್ಲಿ ಈ ರೀತಿ ಪೈಪೋಟಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆಂದು ಪ್ರಯಾಣಿಕರು ಆರೋಪಿಸಿದ್ದಾರೆ.