ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನ, ಸಂಗಬೆಟ್ಟು,ಸಿದ್ದಕಟ್ಟೆಇಲ್ಲಿ ಫೆ.
22 ಮಂಗಳವಾರ ಮತ್ತು ತಾ. 23-2-2022ನೇ ಬುಧವಾರ ಈ ಎರಡು ದಿನಗಳ ಕಾಲ ವರ್ಷಾವಧಿ ಮಹೋತ್ಸವವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಬ್ರಹ್ಮಶ್ರೀ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಸರಕಾರದ ಕೋವಿಡ್-19 ಮಾರ್ಗಸೂಚಿ ಪ್ರಕಾರ ಜರಗಲಿರುವುದು ಎಂದು ಅವರು ತಿಳಿಸಿದ್ದಾರೆ.
ಪುಣ್ಯಾಹ ಕಲಶ, ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀ ವೀರಭದ್ರ ಸ್ವಾಮಿಗೆ ಸಾನಿಧ್ಯ ಪುಷ್ಠಿ ನವಕ ಕಲಶಾಭಿಷೇಕ ಶ್ರೀ ಮಹಮ್ಮಾಯೀ ಮತ್ತು ಶ್ರೀ ದೈವಗಳಿಗೆ ನವಕ ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಗಣಹೋಮ ,
ದೇವತಾ ಪ್ರಾರ್ಥನೆ ಮತ್ತು ಸಿದ್ಧಕಟ್ಟೆ ಮಹಮ್ಮಾಯೀ ಕಟ್ಟೆಯಲ್ಲಿ ಮಹಮ್ಮಾಯೀ ಬಿಂಬಪ್ರತಿಷ್ಠೆ, ಶ್ರೀ ಮಹಮ್ಮಾಯೀ ಸನ್ನಿಧಿಯಲ್ಲಿ ಚಂಡಿಕಾಯಾಗ ಕಾರ್ಯಕ್ರಮ ಗಳು ನಡೆಯಲಿದೆ