ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಂಜುನಾಥ್ ಭಂಡಾರಿ ಜಯಗಳಿಸಿದ್ದಾರೆ.
ಒಟ್ಟು 389 ಮತಗಟ್ಟೆಗಳ 6,011 ಮತಗಳ ಪೈಕಿ, ಬಿಜೆಪಿ ಕೋಟ ಶ್ರೀನಿವಾಸ್ ಪೂಜಾರಿ 3672 ಮತಗಳನ್ನು ಪಡೆದಿದ್ದು, ಕಾಂಗ್ರಸ್ ನ ಮಂಜುನಾಥ್ ಭಂಡಾರಿ 2079 ಮತಗಳನ್ನು ಪಡೆದು ಪ್ರಥಮ ಪ್ರಾಶಸ್ತ್ಯದಲ್ಲಿ ಜಯಗಳಿಸಿದ್ದಾರೆ.
ಇನ್ನು ಎಸ್ ಡಿಪಿಯ ಅಭ್ಯರ್ಥಿ ಶಾಫಿ.ಕೆ 204 ಮತಗಳನ್ನು ಪಡೆದಿದ್ದಾರೆ.
6,011 ಮತಗಳ ಪೈಕಿ 5,955 ಸಿಂಧು ಮತಗಳು ಚಲಾವಣೆ ಆಗಿದೆ. 56 ಅಸಿಂಧು ಮತಗಳಾಗಿವೆ.
ಕೋಟ ಶ್ರೀನಿವಾಸ ಪೂಜಾರಿ ಈ ಗೆಲುವಿನಿಂದ ಸತತ ನಾಲ್ಕನೇ ಬಾರಿ ಪರಿಷತ್ ಪ್ರವೇಶ ಮಾಡಿದ್ದಾರೆ.
ಚುನಾವಣೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ:
ಬಿಜೆಪಿ ಗೆದ್ದ ಕ್ಷೇತ್ರಗಳು
* ಕೊಡಗು-ಸುಜಾ ಕುಶಾಲಪ್ಪ
* ಬೆಂಗಳೂರು- ಗೋಪಿನಾಥ್ ರೆಡ್ಡಿ
* ಚಿತ್ರದುರ್ಗ- ಕೆ.ಎಸ್. ನವೀನ್
* ಉತ್ತರ ಕನ್ನಡ- ಗಣಪತಿ ಉಳ್ವೇಕರ್
* ಬಳ್ಳಾರಿ- ವೈ.ಎಂ.ಸತೀಶ
* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
* ಶಿವಮೊಗ್ಗ -ಡಿ.ಎಸ್.ಅರುಣ್
* ಕಲಬುರ್ಗಿ -ಬಿ.ಜಿ.ಪಾಟೀಲ್
* ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್ ಪೂಜಾರಿ
* ಧಾರವಾಡ (ದ್ವಿಸದಸ್ಯ) -ಪ್ರದೀಪ್ ಶೆಟ್ಟರ್
* ವಿಜಯಪುರ (ದ್ವಿಸದಸ್ಯ) -ಪಿ.ಎಚ್.ಪೂಜಾರ
ಕಾಂಗ್ರೆಸ್ ಗೆದ್ದ ಕ್ಷೇತ್ರಗಳು
* ಬೀದರ್ -ಭೀಮಾರಾಮ್ ಪಾಟೀಲ್
* ಧಾರವಾಡ -ಸಲ್ಲಿಂ ಅಹಮ್ಮದ್
* ಮಂಡ್ಯ -ಗೂಳೀಗೌಡ
* ರಾಯಚೂರು – ಶರಣಗೌಡ ಬಯ್ಯಾಪುರ
* ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್ ಭಂಡಾರಿ
* ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
* ವಿಜಯಪುರ (ದ್ವಿಸದಸ್ಯ) -ಸುನೀಲ್ಗೌಡ ಪಾಟೀಲ
ಜೆಡಿಎಸ್ ಗೆದ್ದ ಕ್ಷೇತ್ರಗಳು
* ಹಾಸನ- ಸೂರಜ್ ರೇವಣ್ಣ
ಪಕ್ಷೇತರರು ಗೆದ್ದ ಕ್ಷೇತ್ರಗಳು
* ಬೆಳಗಾವಿ (ದ್ವಿಸದಸ್ಯ) -ಲಖನ್ ಜಾರಕಿಹೋಳಿ
ಪಟೇಲ್ ಶಿವರಾಂ ಸೋಲಿನ ಏಟು ನೆನಪಿಟ್ಟುಕೊಂಡು ಹಾಸನ ಗೆದ್ದ ಜೆಡಿಎಸ್