ಬಂಟ್ವಾಳ: ತುಂಬೆ ಹೊಸ ವೆಂಟೆಡ್ ನ ಕೆಳ ಭಾಗದ ನದಿ ತೀರದ ಇಕ್ಕೆಲಗಳಲ್ಲಿರುವ ಕೃಷಿ ಹಾಗೂ ಕೃಷಿ ಭೂಮಿ ನೀರು ಪಾಲಾಗಿ ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಗಳೂರು ಮಹಾನಗರ ಪಾಲಿಕೆ ಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂ ನಿಂದ ಹೊರಕ್ಕೆ ಚೆಲ್ಲುವ ನೀರಿನ ರಭಸಕ್ಕೆ ಕೆಳಭಾಗದಲ್ಲಿ ನೇತ್ರಾವತಿ ನದಿ ತೀರದ ಎರಡು ಬದಿಯ ಕೃಷಿ ಭೂಮಿಗಳು ಕೊರತೆಯಿಂದ ನದಿ ಪಾಲಾಗಿವೆ.
ಸುಮಾರು ಎಂಟು ಕುಟುಂಬಗಳ ಅಂದಾಜು 50 ಸೆಂಟ್ಸ್ ಜಮೀನು ನೀರಿನ ರಭಸಕ್ಕೆ ಕೊರೆದು ಜರಿದು ಬಿದ್ದಿದೆ .
ಈ ಭಾಗದಲ್ಲಿ ಎಂಟು ಕುಟುಂಬ ನೂರಾರು ಅಡಿಕೆ ಕೃಷಿ, ತೆಂಗು ಬಾಳೆ ಕೃಷಿಗಳು ನದಿ ಪಾಲಾಗಿದೆ.
ಕೃಷಿ ಭೂಮಿ ನಷ್ಟ ಉಂಟಾಗಿರುವ ಬಗ್ಗೆ ಭೂ ಮಾಲೀಕರು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬೊಳ್ಳಾರಿ ಮಾಜಿ ಅಧ್ಯಕ್ಷ ಮಹಮ್ಮದ್ ವಳವೂರು ಹಾಗೂ ಪಂಚಾಯತ್ ಪಿ.ಡಿ.ಒ ಬೇಟಿ ನೀಡಿ ಫಲಾನುಭವಿಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
*ಅವೈಜ್ಞಾನಿಕ ಕಾಮಗಾರಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬೊಳ್ಳಾರಿ*
ತುಂಬೆ ವೆಂಟೆಡ್ ಡ್ಯಾಂ ನ ಅವೈಜ್ಞಾನಿಕ ವಿಧಾನ ದ ಕಾಮಗಾರಿ ಯ ಪರಿಣಾಮ ವಾಗಿ ಇಂದು ಡ್ಯಾಂ ನ ಕೆಳಭಾಗದಲ್ಲಿ ನದಿ ತೀರದ ಎರಡು ಬದಿಯ ಕೃಷಿ ಭೂಮಿಗಳು ನೀರಿನ ಕೊರತೆಕ್ಕೊಲಗಾಗಿ ನದಿ ಪಾಲಾಗಿದೆ.
ಕೂಡಲೇ ಸಂತ್ರಸ್ತ ರೈತರಿಗೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳು ಜತೆಯಾಗಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ದರು.