ವಿಟ್ಲ : ಮಾಣಿಲ ಗ್ರಾಮಪಂಚಾಯತ್ ಸಭಾಂಗಣದಲ್ಲಿ ” ಕ್ಷಯರೋಗ ನಿಯಂತ್ರಣ ಕಾರ್ಯಪಡೆ ” ಸಭೆ ನಡೆಯಿತು.
ದ.ಕ.ಜಿಲ್ಲಾ ಕ್ಷಯರೋಗನಿಯಂತ್ರಣಾಧಿಕಾರಿಗಳು ಸವಿಸ್ತಾರ ಮಾಹಿತಿ ನೀಡಿದರು. 2025ರೊಳಗೆ ಕ್ಷಯಮುಕ್ತಭಾರತದ ಅಂಗವಾಗಿ ಕ್ಷಯಮುಕ್ತ ಮಾಣಿಲ ಗ್ರಾಮವನ್ನು ಸಾಧಿಸುವ ಕುರಿತು ಸಕ್ರಿಯವಾಗಲು ಸಲಹೆ ನೀಡಿದರು. ಇತರ ಕ್ಷಯರೋಗ ನಿರ್ಮೂಲನ ಸಿಬ್ಬಂದಿಗಳೂ ಪಂಚಾಯತ್ ನ ಸಹಭಾಗಿತ್ವದ ಕುರಿತು ಮಾತಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಪಿಡಿಓ, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಕ್ಷಯನಿಯಂತ್ರಣಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಛೇರಿಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪೆರುವಾಯಿ ವೈದ್ಯಾಧಿಕಾರಿಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಕೊನೆಗೆ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.