ಬಂಟ್ವಾಳ: ತಾಲೂಕು ಪಂಚಾಯತ್ ಕಚೇರಿಯಲ್ಲಿ ಇಂದು ಅಕ್ಟೋಬರ್ 13 ರಂದು ಆಯುಧ ಪೂಜೆ ನಡೆಯಿತು.
ಧಾರ್ಮಿಕ ವಿಧಿವಿಧಾನಗಳು ನಡೆದ ಬಳಿಕ ಕಚೇರಿಯ ವಾಹನಗಳಿಗೆ ಹಾಗೂ ಕಚೇರಿಯ ಕಂಪ್ಯೂಟರ್ ಸಿಸ್ಟಮ್ ಗಳಿಗೆ ಪುರೋಹಿತ ವರ್ಗದಿಂದ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾ.ಪಂ.ಸಹಯಕ ನಿರ್ದೇಶಕ ದಿನೇಶ್, ಶಾಸಕರ ಸಹಾಯಕ ಶಿವಾನಂದ ಪೂಜಾರಿ, ಮ್ಯಾನೇಜರ್ ಶಾಂಭವಿ, ಸಿಬ್ಬಂದಿ ಗಳಾದ ಚಂದ್ರಾವತಿ, ಟ್ರಸ್ಸಿ ರೊಡ್ರಿಗಸ್, ಕುಶಾಲಪ್ಪ, ಆಶೋಕ್ ಬರಿಮಾರ್, ಸವಿತಾ ವಿರಕಂಭ, ಮುರಳಿ, ರಮೇಶ್, ಸವಿತಾ , ಜೊಯೆಲ್, ವಾಯ್ಲೆಟ್ ಮತ್ತಿತರರು ಉಪಸ್ಥಿತರಿದ್ದರು.