ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿಜಿಯವರಿಗೆ ಆಯೂರಾರೋಗ್ಯ ಕರುಣಿಸಲು ಹಾಗೂ ಬಲಿಷ್ಠ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಸೆ.17ರಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಧ್ಯಾಹ್ನ 12.00 ಗಂಟೆಗೆ ಮಾನ್ಯ ಪ್ರಧಾನಿಯವರ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.
ಈ ವಿಶೇಷ ಪೂಜಾ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೆಸರ ವಿಠಲ್ ಶೆಟ್ಟಿ ಮೂಡಾಯೂರು,ಬೆಳ್ತಂಗಡಿ ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಜಿಲ್ಲಾ ಹಿಂದುಳಿದ ವರ್ಗಗಳ ಮೊರ್ಚಾದ ಕಾರ್ಯಕಾರಿಣಿ ಸದಸ್ಯರಾದ ವಿಶ್ಚನಾಥ ಪೂಜಾರಿ ಹಾರಬೆ. ತಾಲೂಕು ರೈತಮೊರ್ಚಾದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಗೌಡ ಹಟ್ಟತ್ತೊಡಿ. ಗ್ರಾ.ಪಂ ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಸದಸ್ಯರಾದ ರೂಪ A S , ಹರೀಶ್ ಶೆಟ್ಟಿ ಪದೆಂಜಿಲ, ಉಮೇಶ್ ಸುವರ್ಣ ಅಲೆಕ್ಕಿ, ರತ್ನಾಕರ ಶೆಟ್ಟಿ ಮೂಡಾಯೂರು, ಬೂತ್ ಕಾರ್ಯದರ್ಶಿ ಅಶೋಕ್ ಪಾರೆಂಕಿ. ಹಾಗೂ ಪಾರೆಂಕಿ ಗ್ರಾಮದ 3 ಬೂತಿನ ಸಮಿತಿ ಸದಸ್ಯರು, ಮತ್ತು ಪಕ್ಷದ ಕಾರ್ಯಕರ್ತರು ಭಕ್ತಾದಿಗಳು ಉಪಸ್ಥಿತರಿದ್ದರು