Wednesday, October 25, 2023

ಭಾರತೀಯ ಜನತಾ ಪಾರ್ಟಿಯನ್ನು ಸಂಘಟನಾತ್ಮಕವಾಗಿ ಬೆಳೆಸಲು ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ ಮಾತ್ರ ಸಾಧ್ಯ: ಶಾಸಕ ರಾಜೇಶ್ ನಾಯ್ಕ್

Must read

ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರವಾದ ಯೋಜನೆಗಳನ್ನು ಗ್ರಾಮದ ಪ್ರತಿಯೊಬ್ಬರ ಮನೆಗೆ ತಲುಪಿಸುವ ಮೂಲಕ ಪಕ್ಷಕ್ಕೆ ಬಲತುಂಬುವ ಕೆಲಸ ಬೂತ್ ಮಟ್ಟದ ಕಾರ್ಯಕರ್ತರ ಮೂಲಕ ಆಗಬೇಕಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಅಮ್ಟೂರು ಗ್ರಾಮದ 181 ಬೂತ್ ಅಧ್ಯಕ್ಷ ಶ್ರೀಧರ್ ಪೂಜಾರಿ , ಬೂತ್ ಸಂಖ್ಯೆ 182, ರ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಬೂತ್ ಸಂಖ್ಯೆ 183 ರ ಅಧ್ಯಕ್ಷ ವಿಠಲ ಪ್ರಭು ಅವರ ಮನೆಗೆ ಬೇಟಿ ನೀಡಿ ನಾಮಫಲಕ ಅಳವಡಿಸಿ ಬಳಿಕ ಬೂತ್ ಸಮಿತಿ ಕಾರ್ಯಕರ್ತರ ಜೊತೆ ಮಾತನಾಡಿದರು.

ಭಾರತೀಯ ಜನತಾ ಪಾರ್ಟಿಯನ್ನು ಸಂಘಟನಾತ್ಮಕ ವಾಗಿ ಬೆಳೆಸಲು ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ ಮಾತ್ರ ಸಾಧ್ಯ , ಅ ನಿಟ್ಟಿನಲ್ಲಿ ಕಾರ್ಯಕರ್ತರು ಜೊತೆಯಾಗಿ ಕೆಲಸ ಮಾಡಬೇಕು ಎಂದರು.

ಗ್ರಾಮದ ಅಭಿವೃದ್ಧಿಯ ಜೊತೆಯಲ್ಲಿ ಪಕ್ಷದ ಸಂಘಟನೆ ಗೆ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡುವಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಬಂಟ್ವಾಳದಲ್ಲಿ ಬಡವರ ಆರೋಗ್ಯದ ತಪಾಸಣೆ ಮಾಡುವ ಉದ್ದೇಶಕ್ಕಾಗಿ ಪ್ರಥಮವಾಗಿ ಅನುಷ್ಠಾನಕ್ಕೆ ತಂದ ಐಸಿಯು ಬಸ್ ಇಡೀ ದೇಶದಕ್ಕೆ ಮಾದರಿಯಾಗಿದ್ದು ದೇಶದಲ್ಲಿ ಇದೇ ಮಾದರಿಯಲ್ಲಿ ಐಸಿಯು ಬಸ್ ನ ವ್ಯವಸ್ಥೆ ಮಾಡುವಂತೆ ಕೆ.ಎಂ.ಸಿ.ಆಸ್ಪತ್ರೆ ಯ ವೈದ್ಯರೋರ್ವರು ಪ್ರಧಾನಿ ಮೋದಿಯವರಿಗೆ ಟ್ವೀಟ್ ಮಾಡಿರುವುದು ನಮಗೆ ಸಂತೋಷದ ವಿಚಾರ ಎಂದು ಅವರು ಹೇಳಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಬಿಜೆಪಿ ಕಾರ್ಯ ಕರ್ತರು ಪಕ್ಷವನ್ನು ಸಂಘಟನಾತ್ಮಕ ವಾಗಿ ಬೆಳೆಸಿ ಮುಂದಿನ ಎಲ್ಲಾ ಚುನಾವಣೆಯಲ್ಲಿ ಯೂ ಅಧಿಕಾರ ಪಡೆದುಕೊಂಡು ಗ್ರಾಮದ ಅಭಿವೃದ್ಧಿಯನ್ನು ಮಾಡುವುದರ ಮೂಲಕ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿ ಗಳಿಗೆ ಉತ್ತರ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪಕ್ಷದ ಹಿರಿಯರ ನಿರ್ದೇಶನ ದಂತೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಯೂ ಯಶಸ್ವಿ ಮಾಡುವಂತೆ ಅವರು ತಿಳಿಸಿದರು. ಬಂಟ್ವಾಳದ ಸಮಗ್ರ ಅಭಿವೃದ್ಧಿಯ ಜೊತೆಗೆ ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ ಬೆಳೆಯಬೇಕು ಎಂದು ಅವರು ಹೇಳಿದರು.

ಬೂತ್ ಸಂಖ್ಯೆ 182 ರ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ , ಪಕ್ಷದ ಹಿರಿಯ ಕಾರ್ಯಕರ್ತರನ್ನು ಹಾಗೂ

ಆಗಮಿಸಿದ ಪ್ರತಿಯೊಬ್ಬರನ್ನು ಶಾಸಕರ ನೇತ್ರತ್ವದಲ್ಲಿ ಅಭಿನಂದಿಸಲಾಯಿತು.

ಬೂತ್ ಮಟ್ಟದ ಅಧ್ಯಕ್ಷ ರುಗಳ ಮನೆ ಬೇಟಿ ಮಾಡಿ ನಾಮಫಲಕ ಅಳವಡಿಸುವ ಬಿಜೆಪಿಯ ಕಾರ್ಯ ಕ್ರಮದಲ್ಲಿ ಚೆಂಡೆ ಬ್ಯಾಂಡ್ ವಾದ್ಯ ಗಳಲ್ಲಿ ಶಾಸಕರನ್ನು ಸ್ವಾಗತಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಬೂತ್ ಮಟ್ಟದ ಕಾರ್ಯ ಕರ್ತರು ಈ ಕಾರ್ಯಕ್ರಮದಲ್ಲಿ ಉಲ್ಲಾಸದಿಂದ ತೊಡಗಿಸಿಕೊಂಡರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ,

ಗ್ರಾ.ಪಂ.ಸದಸ್ಯ ರಾದ ಪವಿತ್ರ , ಗೋಪಾಲಕೃಷ್ಣ ಪೂವಳ, ಸುಷ್ಮಾ, ಪ್ರೇಮ, ಇಲ್ಯಾಸ್, ಜಯಂತ ಗೌಡ , ಲಕ್ಮೀ ವಿ.ಪ್ರಭು, ಲಖಿತ ಆರ್ ಶೆಟ್ಟಿ,

ಪ್ರಮುಖರಾದ ಅಭಿಷೇಕ್ ಶೆಟ್ಟಿ,ದಿನೇಶ್ ಅಮ್ಟೂರು,

ಗಣೇಶ್ ರೈ ಮಾಣಿ, ರಮನಾಥ ರಾಯಿ, ಮೋನಪ್ಪ ದೇವಸ್ಯ, ವಜ್ರನಾಥ ಶೆಟ್ಟಿ, ಆನಂದ ಶಂಭೂರು , ಜಿತೇಶ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಪ್ರೇಮ ಶೆಟ್ಟಿ, ದೇವಕಿದಿವಾಕರ ಪೂಜಾರಿ, ಇಂದಿರಾ ರೈ, ನಂದಗೋಕುಲ ಮಹಾಬಲ ಶೆಟ್ಟಿ, ತ್ರಿವೇಣಿ

ಮತ್ತಿತರರ ಪ್ರಮುಖ ರು ಉಪಸ್ಥಿತರಿದ್ದರು.

More articles

Latest article