ಬಂಟ್ವಾಳ: ಬಿ.ಮೂಡ ಗ್ರಾಮದ ಅಜ್ಜಿಬೆಟ್ಟುವಿನಲ್ಲಿರುವ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ಹಿನ್ನೆಲೆಯಲ್ಲಿ ಪೋಷಕರ ಸಭೆ ನಡೆಯಿತು. ಈ ಸಂದರ್ಭ ಸಮಿತಿ ರಚನಾ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಹರೀಶ ಮಾಂಬಾಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಮತಾ ಕುಪ್ಪಿಲ, ಸದಸ್ಯರಾಗಿ ರೋಷನ್ ಡಿಸೋಜ, ಕೇಶವ ನಾಯಕ್, ಪ್ರೇಮಾ, ಸುಜಾತಾ, ಶಿಲ್ಪಾ, ವಿನುತಾ, ವನಿತಾ, ಕುಮುದಾಕ್ಷಿ, ಸುನಂದಾ, ಜ್ಯೋತಿ, ಗಣೇಶ್ ಟಿ, ರಾಜೇಂದ್ರ, ಪಾಂಡು ಮಾದರ, ದೀಪಕ್, ಪ್ರಭಾಕರ್ ಮತ್ತು ರಾಜೇಶ್ವರಿ ಆಯ್ಕೆಗೊಂಡರು. ನಾಮನಿರ್ದೇಶಿತ ಸದಸ್ಯರಾಗಿ ಮುಖ್ಯೋಪಾಧ್ಯಾಯಿನಿ ಕುಶಲ ಎ (ಕಾರ್ಯದರ್ಶಿ), ಪುರಸಭಾ ಸದಸ್ಯೆ ವಿದ್ಯಾವತಿ, ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷ ಉದಯ ಅಮೀನ್, ಹಿರಿಯ ಸಹಾಯಕ ಶಿಕ್ಷಕಿ ತಾಹಿರಾ ಬಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸ್ಥಳೀಯ ಆರೋಗ್ಯ ಕಾರ್ಯಕರ್ತೆ ನೇಮಕಗೊಂಡರು. ಇದೇ ಸಂದರ್ಭ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕವನ್ನು ವಿತರಿಸಲಾಯಿತು. ಶಿಕ್ಷಕ ನವೀನ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.