ಕೋವಿಡ್ ಕಾರಣಕ್ಕಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ನೀಡಲಾಯಿತು.
ರಾಜ್ಯದ್ಯಂತ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು ವಿವಿಧ ಸ್ತರಗಳು ಸೋಮವಾರದಿಂದ ಚಟುವಟಿಕೆಗಳನ್ನು ಆರಂಭಿಸಿದೆ. ಆದರೆ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿರುವು ಬಗ್ಗೆ ವಿದ್ಯಾರ್ಥಿಗಳ ಪೋಷಕರು ಅಳಲು ತೋಡಿಕೊಂಡಿರುವುದನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ.
ರಾಜ್ಯದ್ಯಂತ ಬಹುತೇಕ ಪೋಷಕರು ಶಾಲೆ ಪುನಾರಂಭಿಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ನಮ್ಮ ಸಮಿತಿಯ ಸಭೆಯಲ್ಲೂ ಈ ಬಗ್ಗೆ ಅಭಿಪ್ರಾಯಗಳು ಕೇಳಿ ಬಂದಿದೆ. ಸಾಕಷ್ಟು ದೋಷ ಪೂರಿತವಾಗಿರುವ ಆನ್ಲೈನ್ ಹಾಗೂ ವಿದ್ಯಾಗಮ ಶಿಕ್ಷಣ ವ್ಯವಸ್ಥೆ ಕೈಗೊಳ್ಳುವ ಬದಲು ಶಾಲೆಗಳನ್ನು ಪುನಾರಂಭಿಸಿ ಮುಖಾಮುಖಿ ಶಿಕ್ಷಣಕ್ಕೆ ಆದ್ಯತೆ ಕೊಡುವುದು ಉತ್ತಮವಾಗಿದೆ. ತರಗತಿಯಲ್ಲಿ ನಡೆಯುವ ಪಾಠ ಹಾಗೂ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ಕೋವಿಡ್ ಸುರಕ್ಷತೆಯ ದೃಷ್ಟಿಯಿಂದಲೂ ಸೂಕ್ತ ಎನ್ನುವುದು ನಮ್ಮ ಅನಿಸಿಕೆ. ಕಳೆದ ೧೫ ತಿಂಗಳಿನಿಂದ ಶಾಲೆಗೆ ಹಾಜರಾಗದೆ ಮಕ್ಕಳ ಶೈಕ್ಷಣಿಕ ಬದುಕು ದಯಾನೀಯವಾಗುತ್ತಿದೆ. ಆದ್ದರಿಂದ ದಯಾಳುಗಾಳದ ತಾವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಸೂಕ್ತ ಮುನ್ನೆಚ್ಚರಕೆಯನ್ನು ಕೈಗೊಂಡು ಮುಂದಿನ ಜುಲೈ 21 ರೊಳಗಾಗಿ ರಾಜ್ಯಾದ್ಯಂತ ಶಾಲೆಗಳನ್ನು ಪುನಾರಂಭಿಸಬೇಕು ಎಂದು ಈ ಮೂಲಕ ವಿನಂತಿಸುತ್ತಿದ್ದೇವೆ.