ಬಂಟ್ವಾಳ: ಗುಣಮಟ್ಟದ ಆಹಾರ ಉತ್ಪನ್ನದ ವಸ್ತುಗಳಿಗೆ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಬೇಡಿಕೆಯಿದ್ದು, ಬೆಳೆಯುತ್ತಿರುವ ಬಂಟ್ವಾಳ ಪಟ್ಟಣಕ್ಕೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ಶಾಖೆಯು ಹೊಸ ಚೈತನ್ಯವನ್ನು ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ಕುಮಾರ್ ಕಟೀಲು ಅವರು ಹೇಳಿದರು.
ಅವರು ಮುಂಬಯಿಯ ಪ್ರಖ್ಯಾತ ಕೇಕ್ ತಯಾರಿಕೆ ಸಂಸ್ಥೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ನ ನೂತನ ೧೪೧ನೇ ಶಾಖೆಯು ಸೋಮವಾರ ಬಿ.ಸಿ.ರೋಡಿನ ಅನ್ಸಾರ್ ಕಾಂಪ್ಲೆಕ್ಸ್ನಲ್ಲಿ ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಮಾಲಕತ್ವದ ವೃಷಭ ಎಂಟರ್ಪ್ರೈಸಸ್ ಅಡಿಯಲ್ಲಿ ಶುಭಾರಂಭಗೊಂಡಿತು.
ಈ ನೂತನ ಶಾಖೆಗೆ ಸಂಸದರು ಬೇಟಿ ನೀಡಿ ಶುಭಹಾರೈಸಿ ಬಳಿಕ ಮಾತನಾಡಿದರು.
ಮುಂಬಯಿಯಲ್ಲಿ ಉದ್ಯಮಿಯಾಗಿರುವ ವಿವೇಕ್ ಶೆಟ್ಟಿಯವರು ತನ್ನ ಹುಟ್ಟೂರಿನ ಮೇಲಿನ ಅಭಿಮಾನದಿಂದ ಇಲ್ಲಿನ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಉದ್ಯಮದ ಜೊತೆಯಲ್ಲಿ ಸಾಮಾಜಿಕ, ಧಾರ್ಮಿಕ , ಸಂಘಟನಾತ್ಮಕವಾಗಿ ವಿವೇಕ್ ಶೆಟ್ಟಿ ಅವರ ಸೇವೆ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ ಎಂದು ಅವರು ಅಭಿನಂದಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಬೆಳಗಿಸಿ ಶುಭಹಾರೈಸಿದರು.
ನೂತನ ಶಾಖೆಗೆ ಮಾಜಿ ಸಚಿವ ಬಿ.ರಮಾನಾಥ ರೈ, ಎ.ಜೆ.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಪ್ರಶಾಂತ್ ಮಾರ್ಲ, ನವದುರ್ಗಾ ಪುಡ್ ಪೊಡಕ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಗುಣಪಾಲ್ ಶೆಟ್ಟಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ಅರುಣ್ ಆಳ್ವ, ಗೋಕುಲ್ ಭಂಡಾರಿ, ಕಿರಣ್ ಆಳ್ವ, ಸುದೀಪ್ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪುರುಷೋತ್ತಮ ಶೆಟ್ಟಿ, ಪುಷ್ಪರಾಜ್ ಚೌಟ, ಸುಕೇಶ್ ಚೌಟ, ಲೋಕನಾಥ ಶೆಟ್ಟಿ, ಚಂದ್ರಾವತಿ ಬಿ.ಶೆಟ್ಟಿ, ಸಂಧ್ಯಾ ವಿವೇಕ್ ಶೆಟ್ಟಿ, ಲಲಿತಾ ಶೆಟ್ಟಿ, ವರ್ಷಾ, ವೀಕ್ಷಾ, ವಿಖ್ಯಾತ್ ಶೆಟ್ಟಿ, ವರ್ಷಾ ಹೆಗ್ಡೆ, ವಿಹಾರ ಹೆಗ್ಡೆ ಮೊದಲಾದವರು ಭೇಟಿ ನೀಡಿ ಶುಭಹಾರೈಸಿದರು.
ಮಾಲಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಮುಂಬಯಿಯ ಪ್ರಖ್ಯಾತ ಕೇಕ್ ತಯಾರಿಕೆ ಸಂಸ್ಥೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ದೇಶಾದ್ಯಂತ ೧೪೧ನೇ ಶಾಖೆಗಳನ್ನು ಹೊಂದಿದ್ದು, ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ೨೨ ಶಾಖೆಗಳ ಮೂಲಕ ಕರಾವಳಿ ಜನತೆಯ ಮೆಚ್ಚುಗೆಯನ್ನು ಗಳಿಸಿದೆ. ಬರ್ತ್ಡೇ ಪಾರ್ಟಿ, ಇನ್ನಿತರ ಈವೆಂಟ್ಗಳ ಆಯೋಜನೆಯಲ್ಲೂ ಜನಪ್ರಿಯತೆಗಳಿಸಿದೆ ಸಂಸ್ಥೆಯ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೆಜರ್ ನಿತೇಶ್ ಶೆಟ್ಟಿ ಇರಂದಾಡಿ ತಿಳಿಸಿದ್ದಾರೆ.