ಮಂಗಳೂರು, ಜೂ.15. ನಗರದ ಹೊರವಲಯದ ಮರವೂರು ಸೇತುವೆಯು ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕಳೆದ ಮೂರು – ನಾಲ್ಕು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಪಿಲ್ಲರ್ ವೊಂದು ಕುಸಿದಿದ್ದು, ಇದರಿಂದಾಗಿ ಮಂಗಳೂರು ನಗರದಿಂದ ಬಜಪೆ ವಿಮಾನ ನಿಲ್ದಾಣ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕಡೆಗೆ ತೆರಳುವ ಪ್ರಯಾಣಿಕರಿಗೆ ಕಾವೂರು, ಕೂಳೂರು ಮಾರ್ಗವಾಗಿ ಜೋಕಟ್ಟೆ ಸಂಪರ್ಕಿಸಿ ಬಜಪೆಗೆ ಅಥವಾ ಪಚ್ಚನಾಡಿ, ಗುರುಪುರ ಕೈಕಂಬ ಮಾರ್ಗವಾಗಿ ಬಜಪೆಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here