ಬಂಟ್ವಾಳ: ಕೇವಲ 5/- ರೂಪಾಯಿ ಫೀಸು ಪಡೆಯುವ ವೈದ್ಯರಿಗೊಂದು ಸಲಾಂ .
ಕೋವಿಡ್ ನ ಸಂಕಷ್ಟದ ಈ ಸಮಯದಲ್ಲಿ ಎದೆಗುಂದದೆ ತನ್ನ ಬಳಿ ಬಂದ ರೋಗಿಗಳಿಗೆ ಧೈರ್ಯ ತುಂಬಿ ವೈದ್ಯಕೀಯ ಚಿಕಿತ್ಸೆ ನೀಡುವ ಪ್ರಸಿದ್ದ ವೈದ್ಯ
ಬೆಳ್ತಂಗಡಿ ತಾಲೂಕಿನ , ಮಡಂತ್ಯಾರಿನ ಧನ್ವಂತರೀ..
*ಕಿಶೋರ್ ಕುಮಾರ್ ಅಡ್ಯಂತಾಯ*
ಕಳೆದ 35 ವರ್ಷಗಳಿಂದ ಮಡಂತ್ಯಾರು ಎಂಬ ಪುಟ್ಟ ಊರಿನಲ್ಲಿ ಅನೇಕ ರೋಗಿಗಳಿಗೆ ಸಂಜೀವಿನಿಯಾಗಿ ಇವರ ಸೇವೆ ಸಿಕ್ಕಿದೆ ಎಂಬುದು ಖುಷಿಯ ವಿಚಾರ.
ಕೊರೊನಾ ಸಂದಿಗ್ಧ ಸಮಯದಲ್ಲಿ ರೋಗಿಗಳನ್ನು ಸದಾ ನಗುಮೊಗದಿಂದ ಸ್ವಾಗತಿಸುತ್ತಾ, ಆತ್ಮೀಯ ಮಾತುಗಳಿಂದ ಉಪಚರಿಸಿ , ಮದ್ದಿಗಿಂತಲೂ ಮಾತೇ ರಾಮ ಬಾಣವಾಗಿ ರೋಗಿ ಗುಣಮುಖನಾಗುತ್ತಾನೆ.
ದುಡ್ಡು ಮಾಡುವ ದಂಧೆಯ ವೈದ್ಯರಿವರಲ್ಲ ಇವರು ಇಂದಿಗೂ ಕೇವಲ 5 ರೂ ಪಡೆದು ವೈದ್ಯಕೀಯ ಸೇವೆ ನೀಡುವ ಅಪತ್ಬಾಂಧವ ವೈದ್ಯ ಇವರು.
ಭಯ ನಿವಾರಕರಾಗಿ ಅಭಯದಾಯಕ ಕೈಗುಣ ಸಂಪನ್ನರಾಗಿ,
ಅಶ್ವಿನಿ ದೇವತೆಗಳ ವರ ಪ್ರಸಾದ ರೂಪವಾಗಿ ಮಡಂತ್ಯಾರಿಗೆ ದೊರಕಿದೆ, ಭೌತಿಕವಾಗಿ ವೈದ್ಯ ರೂಪದಲ್ಲಿರುವ , ನಾರಾಯಣೋ….ಹರಿ.ಎಂಬ ಮಾತು ಇಲ್ಲಿನ ಗ್ರಾಮಸ್ಥರ ದ್ದು.
ಚಾರ್ಮಾಡಿ ಸಹಿತ ಪರ ಊರಿನ ರೋಗಿಗಳು ಇಲ್ಲಿಗೆ ಬರುತ್ತಾರೆ ಎಂಬುದು ಇವರ ವೈದ್ಯಕೀಯ ಸೇವೆಗೆ ಸಿಕ್ಕಿರುವ ಗೌರವ.
ಯಾವುದೇ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಇವರ ಬಳಿ ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಉಪಚಾರ ಮಾಡಿ ಕಳುಹಿಸುವ ವೈದ್ಯ ಇವರು.