ಬಂಟ್ವಾಳ: ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಡಾ. ಸತ್ಯ ಶಂಕರ ಶೆಟ್ಟಿ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎ. ಮುತ್ತಪ್ಪ ಗೌಡ ಅಗಲ, ಯತೀಂದ್ರ ಚೌಟ, ಕಾರ್ಯದರ್ಶಿಯಾಗಿ ಬಿ.ನಾರಾಯಣ ರೈ, ಜತೆ ಕಾರ್ಯದರ್ಶಿಗಳಾಗಿ ಲಕ್ಷö್ಮಣ ಭಂಡಾರಿ, ವಿಶ್ವನಾಥ ಸಾಲ್ಯಾನ್ ಬಿತ್ತ, ಕೋಶಾಧಿಕಾರಿಯಾಗಿ ಸಂಜೀವ ಗೌಡ ಅಗಲ, ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಮಾಯಿಲಪ್ಪ ಸಾಲ್ಯಾನ್, ಉತ್ಸವ ಸಮಿತಿ ಉಪಾಧ್ಯಕ್ಷರಾಗಿ ಡೀಕಯ್ಯ ಕುಲಾಲ್ ಮತ್ತು ಸೋಮಶೇಖರ, ಖಾಯಂ ಆಹ್ವಾನಿತ ಸಲಹೆಗಾರರಾಗಿ ಉಳಿ ದಾಮೋದರ ನಾಯಕ್, ವಾಸುದೇವ ಮಯ್ಯ, ರಾಮಯ್ಯ ಭಂಡಾರಿ, ಅಣ್ಣಿ ಪೂಜಾರಿ, ಬಾಲಕೃಷ್ಣ ಪಕಳ, ಜಯಾನಂದ ಪೂಜಾರಿ, ಚೆನ್ನಪ್ಪ ಸಾಲ್ಯಾನ್, ಡೀಕಯ್ಯ ಬಂಗೇರ, ಡಾ. ದಿನೇಶ್ ಬಂಗೇರ, ಗುರುಪ್ರಕಾಶ್, ದಿವಾಕರ ರಾವ್, ಪದ್ಮನಾಭ ರೈ, ರವಿ ಶೆಟ್ಟಿ, ಡಾ. ರಾಜಾರಾಂ ಕೆ.ಬಿ., ರಂಜಿತ್ ಮೈರ, ಶೇಖರ ಕಂಚಲಪಲ್ಕೆ, ಸುರೇಶ ಮೈರ ಆವರು ಆಯ್ಕೆಯಾಗಿದ್ದಾರೆ.