Monday, April 8, 2024

ದೇಶದಲ್ಲಿ ಸುನಾಮಿಯಾಗಿ ಮಾರ್ಪಟ್ಟ ಕೊರೋನ ಅಲೆ! ಒಂದೇ ದಿನ ಪಾಸಿಟಿವ್ ಆದವರ ಸಂಖ್ಯೆ ಎಷ್ಟು ಗೊತ್ತೆ?

ದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಸುನಾಮಿಯಾಗಿ ಆರ್ಭಟಿಸುತ್ತಿದ್ದು ಮಂಗಳವಾರ ಒಂದೇ ದಿನ 2.94 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದೇ ರೀತಿ ದೇಶದಲ್ಲಿ ಮೊದಲ ಬಾರಿ ಕೊರೋನದಿಂದ ಸತ್ತವರ ಸಂಖ್ಯೆ ಎರಡು ಸಾವಿರಕ್ಕಿಂತ ಅಧಿಕವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 62,097, ದೆಹಲಿಯಲ್ಲಿ 28,395, ಕರ್ನಾಟಕ 21,794, ಕೇರಳ 19,577, ಗುಜರಾತ್ 12,206, ರಾಜಸ್ಥಾನ್ 12,201, ತಮಿಳುನಾಡು 10,986, ಬಿಹಾರ 10,455, ಪಶ್ಚಿಮ ಬಂಗಾಳ 9,819, ಹರಿಯಾಣ 7,811, ತೆಲಂಗಾಣ 5,926, ಜಾರ್ಖಂಡ್ 4,969, ಒಡಿಶಾ 4,761, ಉತ್ತರಾಖಾಂಡ 3,012, ಜಮ್ಮು ಮತ್ತು ಕಾಶ್ಮೀರ 2,030 ಮತ್ತು ಗೋವಾದಲ್ಲಿ 1,160 ಕೊರೋನ ಪ್ರಕರಣಗಳು ದೃಢಪಟ್ಟಿದ್ದು ದೇಶದಲ್ಲಿ ಒಟ್ಟು 2,94,291 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.

ಕೊರೋನ ಸೋಂಕು ಬೆಳಕಿಗೆ ಬಂದ ಬಳಿಕ ಅಮೆರಿಕಾದಲ್ಲಿ ಒಂದೇ ದಿನ 3,07,570 ಮಂದಿಗೆ ಸೋಂಕು ಪಸಿಟಿವ್ ಆಗಿದ್ದು ಜಗತ್ತಿನಲ್ಲೇ ಅತ್ಯಧಿಕ ಎಂದು ಪರಿಗಣಿಸಲ್ಪಟ್ಟಿದೆ. ಅಮೆರಿಕಾದಲ್ಲಿ ಒಂದೇ ದಿನ ಪತ್ತೆಯಾದ ದಾಖಲೆಯ ಸಂಖ್ಯೆಯ ಸನಿಹಕ್ಕೆ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಬರುತ್ತಿರುವುದು ದೇಶದ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.

ಮಂಗಳವಾರದAದು ದೇಶದಲ್ಲಿ ಒಟ್ಟು 2,021 ಮಂದಿ ಕೊರೋನ ಸೋಂಕಿನಿAದ ಸಾವನ್ನಪ್ಪಿದ್ದು ಮಹಾರಾಷ್ಟ್ರ ಒಂದರಲ್ಲೇ 519 ಮಂದಿ ಬಲಿಯಾಗಿದ್ದಾರೆ. ದೆಹಲಿಯಲ್ಲಿ 277, ಛತ್ತೀಸ್ಘಡ 191, ಉತ್ತರ ಪ್ರದೇಶ 162, ಕರ್ನಾಟಕ 149 ಹಾಗೂ ಗುಜರಾತಿನಲ್ಲಿ 121 ಮಂದಿ ಸಾವಿಗೀಡಾಗಿದ್ದಾರೆ. ಎರಡನೇ ಅಲೆ ಆರಂಭವಾದಾಗ ಏಪ್ರಿಲ್ ತಿಂಗಳೊAದರಲ್ಲೇ ಒಟ್ಟು 34 ಲಕ್ಷ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಕಳೆದ ಏಳು ದಿನಗಳ ಅವಧಿಯಲ್ಲಿ 17.40 ಲಕ್ಷ ಪ್ರಕರಣಗಳು ಪತ್ತೆಯಾಗಿರುವುದು ಆಘಾತಕಾರಿ ಅಂಶವಾಗಿದೆ.

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...