Wednesday, October 18, 2023

ಸ್ವಚ್ಚತಾ ಕಾರ್ಯಕ್ರಮ

Must read

ಬಂಟ್ವಾಳ: ಗೋಳ್ತಮಜಲು ಗ್ರಾಮಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಪೂವಳ ಇವರ ನೇತೃತ್ವದಲ್ಲಿ ಗೋಳ್ತಮಜಲ್ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾದ ಲಕ್ಷ್ಮಿ ಪ್ರಭು ಇವರುಗಳು ಕಸವನ್ನು ಹೆಕ್ಕುವದರ ಮೂಲಕ  ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಾಜಪ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಉಡುಪಿ ಹಾಸನ ಮಂಗಳೂರು ಎಸ್ಸಿ ಮೋರ್ಚಾದ ಜಿಲ್ಲಾ ಸಹ-ಪ್ರಭಾರಿ ಗಳಾದ ದಿನೇಶ್ ಅಮ್ಟೂರು ಶುಭಹಾರೈಸಿ ಮಾತನಾಡಿದರು ನಮ್ಮ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸು ಮಾಡಲು ನಾವೆಲ್ಲರೂ ಸ್ವಚ್ಛ ಭಾರತದ ಮೂಲಕ ಪಣತೊಡಬೇಕು ಹಾಗೂ ಪ್ರತಿ ಗ್ರಾಮ ಗ್ರಾಮಗಳಲ್ಲಿ ಹಾಗೂ ನಮ್ಮ ಮನಸಿನ ಭಾವನೆಗಳನ್ನು ಸ್ವಚ್ಛ ಪಡಿಸುವ ಮೂಲಕ ದೇಶದ ಅಭ್ಯುದಯಕ್ಕೆ ಎಲ್ಲರೂ ಸಹಕಾರ ನೀಡುವಂತಾಗಲಿ ಎಂದು ಹಾರೈಸಿದರು ಹಾಗು ಪ್ರತಿ ವಾಹನ ಸವಾರರಲ್ಲಿ ಹಾಗೂ ಮನೆಮನೆಗಳಲ್ಲಿ ಜಾಗೃತಿ ಮೂಡಿಸಲಾಯಿತು ಈ ಸಂದರ್ಭದಲ್ಲಿ ಶ್ರೀಕೃಷ್ಣ ಭಜನಾಮಂದಿರದ ಅಧ್ಯಕ್ಷರಾದ ರಮೇಶ್ ಶೆಟ್ಟಿ ಗಾರ್ ಭಾ ಜ ಪ ಅಮ್ಟೂರು ಸಮಿತಿಯ ಅಧ್ಯಕ್ಷರುಗಳಾದ ಬೈದರಡ್ಕ ಪ್ರಭಾಕರ ಶೆಟ್ಟಿ ಶ್ರೀಧರ ಸುವರ್ಣ ಗೋಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯರಾದ ಸುಷ್ಮಾ ಆನಂದ್ ಪ್ರೇಮ ಗುರುವಪ್ಪ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಮಹಾಬಲ ಸಾಲ್ಯಾನ್ ಅಂಗನವಾಡಿ ಕಾರ್ಯಕರ್ತರಾದ ಸುಜಾತ ಕೊಟ್ಟಾರಿ ಇಂದಿರಾ ಯಶೋಧ ಆಶಾ ಕಾರ್ಯಕರ್ತೆ ಉಮಾವತಿ ಅನಂತಾಡಿ ಶಾಲೆಯ ಶಿಕ್ಷಕರಾದ ರಾಧಾಕೃಷ್ಣ ಕುಲಾಲ್ ಮಹಿಳಾ ಮಂಡಲದ ಪ್ರಮುಖರಾದ ಇಂದಿರಾ ರೈ ಪ್ರೇಮ ಎಸ್ ಶೆಟ್ಟಿ ಪ್ರಮುಖರಾದ ಉಮೇಶ್ ಪೂಜಾರಿ ಯತೀಶ್ ಸಾಲ್ಯಾನ್ ಸಂದೀಪ್ ಶೆಟ್ಟಿ ವಿಶ್ವನಾಥ್ ಕುಲಾಲ್ ಮನೋಹರ ಆಚಾರ್ಯ ಪುಷ್ಪರಾಜ ಕುಲಾಲ್ ವಸಂತ ಕುಲಾಲ್ ಹಾಗೂ ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ನೇತಾಜಿ ಯುವಕ ಸಂಘ ಪೂವಳ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು

More articles

Latest article