ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ದಿನಾಂಕ ಕನ್ನಡ ಸಂಘ ಹಾಗೂ ಆಂತರಿಕ ಸಮಿತಿ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ “ಕಿರಗೂರಿನ ಗೈಯಾಳಿಗಳು” ಚಲನಚಿತ್ರ ಪ್ರದರ್ಶನ ನಡೆಯಿತು.
ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ವೇತ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ರಾದ ಡಾ. ಲೋಕೇಶ್, ಪ್ರೊ. ಆಜನೇಯ, ಪ್ರೊ. ಪ್ರೀತಿ ರಾವ್, ಪ್ರೊ. ದೀಕ್ಷಿತಾ, ಪ್ರೊ. ರಾಜೇಶ್ವರಿ, ಖಂಡೋಜಿ ಲಮಾಣಿ, ಡಾ. ಕೃಷ್ಣನಾಂದ ಪಿ.ಎಂ, ರೀಟ, ರಕ್ಷಿತಾ, ರಮ್ಯ, ಚಂದ್ರಶೇಖರ, ಸುಜಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿದರು.