ಬಂಟ್ವಾಳ : ಅಮೃತ ಪ್ರಕಾಶ ಪತ್ರಿಕೆಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ 30ಹಾಗೂ 31ನೆಯ ಕೃತಿ ಗೋವಿಂದರಾಜು ಬೆಂಗಳೂರು ಅವರ “ಪ್ರಥಮ ಹೆಜ್ಜೆ “ಹಾಗೂ ಭೀಮರಾವ್ ವಾಸ್ಠರ್ ಅವರ ಸಂಪಾದಿತ ಕೃತಿ “ಚಂದನ ಕುಸುಮ”ಇಂದು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು .ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಭೀಮರಾವ್ ವಾಸ್ಠರ್ ಅಧ್ಯಕ್ಷತೆ ವಹಿಸಿದ್ದರು .ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ,ಖ್ಯಾತ ಚಿತ್ರ ಕಲಾವಿದ ಬಿ ಕೆ ಮಾಧವ ರಾವ್ ಕೃತಿ ಬಿಡುಗಡೆಗೊಳಿಸಿದರು. ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ ಮಾಲತಿ ಶೆಟ್ಟಿ ಮಾಣೂರು ಹಾಗೂ ಉಪ ಸಂಪಾದಕ ಡಾ. ಕಾಸರಗೋಡು ಅಶೋಕ್ ಕುಮಾರ್ ಉಪಸ್ಥಿತರಿದ್ದರು