Thursday, October 26, 2023

ತೋಟಗಾರಿಕ ಇಲಾಖೆ ಮೂಲಕ ಯಂತ್ರಿಕೃತ ಕಟಾವು ಯಂತ್ರದ ವಿತರಣೆ: ರಾಜೇಶ್ ನಾಯ್ಕ್

Must read

ತೋಟಗಾರಿಕೆ ಇಲಾಖೆ ಮೂಲಕ ಅನುಷ್ಟಾಗೊಳ್ಳುವ ಎಣ್ಣೆ ತಾಳೆ ವ್ಯವಸಾಯ ಯೋಜನೆಯಡಿ ಎಣ್ಣೆತಾಳೆ ಬೆಳೆ ಬೆಳೆದ ರೈತರಿಗೆ ಎಣ್ಣೆತಾಳೆಮರದ  ಗರಿಗಳನ್ನು ಹಾಗೂ  ಹಣ್ಣಿನ ಗೊಂಚಲುಗಳನ್ನು ಕಟಾವು ಮಾಡುವ ಯಾಂತ್ರೀಕೃತ ಕಟಾವು ಯಂತ್ರವನ್ನು ಬಂಟ್ವಾಳ ಶಾಸಕರಾದ ಸನ್ಮಾನ್ಯ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ರವರು ಫಲಾನುಭವಿಗಳಾದ ಅಮ್ಟಾಡಿ ಗ್ರಾಮದ ಶ್ರೀ ರೋಬರ್ಟ್ ಡಿಸೋಜ ಹಾಗೂ ರಾಯಿ ಗ್ರಾಮದ ಶ್ರೀ ವಿಕ್ಟರ್ ರೊಡ್ರಿಗಸ್ ರವರಿಗೆ ವಿತರಿಸಿದರು. ಖಾದ್ಯ ತೈಲ ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರಕಾರವು ಎಣ್ಣೆತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದು ರೈತರು ಎಣ್ಣೆ ತಾಳೆ ಬೆಳೆಯಲು ಮುಂದೆ ಬರಬೇಕು ಎಂದು ಶಾಸಕರು ಕರೆ ನೀಡಿದರು. ಬಂಟ್ವಾಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಜೋ ಪ್ರದೀಪ್ ಡಿಸೋಜ,  ಹಾಜರಿದ್ದರು

 

 

More articles

Latest article