ವಿಟ್ಲ: ವಿಟ್ಲ ಜೆಸಿಐ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಚಂದಳಿಕೆಯ ’ಯುವ ಕೇಸರಿ ಅಬೀರಿ-ಅತಿಕಾರಬೈಲಿನಲ್ಲಿ ನಡೆಯಿತು.
2021ರ ಸಾಲಿನ ವಿಟ್ಲ ಜೆ.ಸಿ.ಐ ನೂತನ ಅಧ್ಯಕ್ಷ ಜೆ.ಸಿ.ಚಂದ್ರಹಾಸ ಶೆಟ್ಟಿ ತಮ್ಮ ಘಟಕದ ಪ್ರಥಮ ಕಾರ್ಯಕ್ರಮವಾಗಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯುವ ಕೇಸರಿ ಯುವಕ ಸಂಘದ ಅಧ್ಯಕ್ಷರಾದ ಗಂಗಾಧರ ಪೂಜಾರಿ ಪರನೀರು ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಘವಹಿಸಿದ ಜೆ.ಸಿ.ಅಣ್ಣಪ್ಪ ಸಾಸ್ತನರು ಯುವಕರ ಸಂಘಟನೆ ಜೆ.ಸಿ.ಐ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳಿಗೂ ತುಲನಾತ್ಮಕ ಸಂಬಂಧವನ್ನು ತಿಳಿಸಿದರು.
ನಿಕಟ ಪೂರ್ವಾಧ್ಯಕ್ಷರಾದ ಜೆ.ಸಿ.ದಿನೇಶ್ ಶೆಟ್ಟಿ ಯುವದಿನದ ಶುಭಾಶಯ ಕೋರಿದರು.ಯುವಕ ಮಂಡಲದ ಕಾರ್ಯದರ್ಶಿ ಯೋಗೀಶ ಕೇಪಳಗುಡ್ಡೆ ಉಪಸ್ಥಿತರಿದ್ದರು.
ವಿಟ್ಲ ಜೆಸಿಐ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಯುವಕೇಸರಿಯ ಸದಸ್ಯರುಗಳು ಉಪಸ್ಥಿತರಿದ್ದರು. ಈ ಯಶಸ್ವಿ ಕಾರ್ಯಕ್ರಮದ ಅಂತ್ಯದಲ್ಲಿ ಜೆ.ಸಿ ವಿಟ್ಲ ಘಟಕದ ಕಾರ್ಯದರ್ಶಿ ಜೆ.ಸಿ ಪರಮೇಶ್ವರ ಹೆಗಡೆ ವಂದಿಸಿದರು.


