ಬಂಟ್ವಾಳ : ಅಕ್ರಮ ಕೆಂಪುಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ಮಂಗಳವಾರ ಬಂಟ್ವಾಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ 2 ಲಾರಿ ಹಾಗೂ 2 ಮೆಷಿನ್ ಗಳನ್ನು ವಶಪಡಿಸಿಕೊಂಡ ಘಟನೆ ಇರಾ ಗ್ರಾಮದಲ್ಲಿ ನಡೆದಿದೆ.



ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರ ನಿರ್ದೇಶನದಂತೆ ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಹಾಗೂ ಗ್ರಾಮಕರಣಿಕೆ ತನ್ವಿ ಅವರು ದಾಳಿ ನಡೆಸಿದ್ದಾರೆ. ಸೊತ್ತುಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ.