ಬೆಳ್ತಂಗಡಿ: ನಡ ಗ್ರಾಮದ ಮಂಜೊಟ್ಟಿ ಎಂಬಲ್ಲಿ ರಾತ್ರಿ ಸಮಯದಲ್ಲಿ ಸ್ಕೂಟಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮಲವಂತಿಗೆ ಗ್ರಾಮದ ಮೇಗಿನ ಕರಿಯಾಲು ಜನಾರ್ದನ ಗೌಡರ ಪುತ್ರ ಗೋಪಾಲ ಕೃಷ್ಣ(19) ಮೃತಪಟ್ಟ ವ್ಯಕ್ತಿ.
ಕಿಲ್ಲೂರಿನಿಂದ ಬೆಳ್ತಂಗಡಿ ಕಡೆ ಸ್ಕೂಟಿಯಲ್ಲಿ ಬರುತಿರುವಾಗ ಬೆಳ್ತಂಗಡಿಯಿಂದ ನಾವೂರು ಕಡೆ ಹೋಗುತಿದ್ದ ಬೈಕ್ ಡಿಕ್ಕಿ ಹೊಡೆದು ಈ ಸಾವು ಸಂಭವಿಸಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ದಾರಿ ಮಧ್ಯೆ ಮೃತಪಟ್ಟಿದ್ದಾರೆ.