ವಿಟ್ಲ: ಲೋಕಾನುಗ್ರಹಿ ಸಮನ್ವಯ ಪರಿಷತ್ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ರಾಜ್ಯ ಮಟ್ಟದ ಆನ್ಲೈನ್ ಸೌಹಾರ್ದ ಕವಿಗೋಷ್ಠಿ ನಡೆಯಿತು.
ಕವಿ, ಪ್ರಾಧ್ಯಾಪಕ ಎನ್.ವಿಶ್ವನಾಥ್ ನೇರಳಕಟ್ಟೆ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಇಖ್ಬಾಲ್ ಬಾಳಿಲ ಸಮಾರಂಭವನ್ನು ಉದ್ಘಾಟಿಸಿದರು.
ರಾಜ್ಯ ನಾನಾ ಜಿಲ್ಲೆಗಳ ಕವಿಗಳಾದ ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ಕೆ.ಎಂ.ಅಶ್ರಫ್ ಸಖಾಫಿ ಕುರ್ನಾಡು, ಮಂಜುನಾಥ್ ಮಲೆನಾಡು,ಎನ್.ಎಂ.ಹನೀಫ್ ನಂದರಬೆಟ್ಟು,ಲಕುಮಿಕಂದ ಮುಕುಂದ ಬೆಳಗಾವಿ, ಎಂ.ಎಂ.ಮಹರೂಫ್ ಸುಲ್ತಾನಿ ಆತೂರು, ಭರಮಣ್ಣ ಗುರಿಕಾರ್ ಕೊಪ್ಪಳ, ಹಮೀದ್ ಹಸನ್ ಮಾಡೂರು, ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ, ಕುಸುಮಾಕರ ಅಂಬೆಕಲ್ಲು, ಸುಹೇಚ ಪರಮವಾಡಿ, ಪ್ರೀತಿ ಭರತ್, ಶಿಖ ಬಜ್ಪೆ, ಬುಸ್ಸಣ್ಣ ವಿ.ಯಾದವ್ ಬದ್ದೇಪಲ್ಲಿ, ಸಮ್ಯಕ್ತ್ ಜೈನ್ ಕಡಬ ಮೊದಲಾದವರು ಕವನ ವಾಚನ ಮಾಡಿದರು.
ಸಾಮಾಜಿಕ ಮುಖಂಡ ಎ.ಬಿ.ಮೊಹಿದೀನ್ ಕಳಂಜ, ಪ್ರಶಾಂತ್ ಚೌಕದಪಾಲು, ಮುಹಮ್ಮದ್ ಹಾಜಿ ಪರಪ್ಪು,ಡಿ.ಐ.ಅಬೂಬಕರ್ ಕೈರಂಗಳ, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಸಾಮಾಜಿಕ ಯುವ ಮುಖಂಡ ಸಿರಾಜ್ ಮಣಿಲ,ಎ.ಸಲ್ಮಾನ್ ಹಾರಿಸ್ ಆಲಂತಡ್ಕ,ಪುಣಚ, ಮನೋಹರ ನಾಯಕ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಮಂಗಳ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಸ್ವಾಗತಿಸಿದರು. ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.