Saturday, April 6, 2024

ಪೊರೆ

ಅವಳು
ಬಂದ ಎರಡು ಪಟ್ಟು
ವೇಗದಲ್ಲಿಯೇ ದಿಢೀರನೆ
ಹೊರಟು ನಿಂತಾಗ
ತುಂಬಿತು ಕಣ್ಣು !

ಜಾರಿ ಬೀಳದ ಕಂಬನಿ
ಅಂತರ್ಧಾನಿಯಾಯಿತು
ತನ್ನಷ್ಟಕ್ಕೆ ತಾನು!

ಹೊರಟ ಪಾದಗಳು ಆಗ
ಎದೆಯ ಮೇಲೆ ಮೊದಲ
ಹೆಜ್ಜೆ ಇಟ್ಟಾಗ ಅದೆಷ್ಟು ಹಿಗ್ಗು!

ಅವಳೊಲವಿಗೆದೆಯೇ ಹೂ
ಹಾಸು ರತ್ನಗಂಬಳಿ!
ಇಂದು ಸುಟ್ಟು ಕರಕಲಾದ
ಬೂದಿ ಮೆತ್ತಿದ ಬೋಳು ಗುಡ್ಡ!

ಮೋಹ ವ್ಯಾಮೋಹ,ಆಸೆ
ಲಾಲಸೆಗಳೆಲ್ಲ ಎಲ್ಲೋ ಬಿದ್ದು
ಕೊಂಡಿವೆ ಬಿರಿದೆದೆಯ
ಗೋಣಿಚೀಲವ ಕಳಚಿ!

ಬಿಸಿಯುಸಿರ ಬಸಿರು
ಹೆರಿಗೆಗಾಣದೆ ಗರ್ಭಪಾತವೂ
ಆಗದೆ ಆಪೋಶನಗೈದವಳ
ಕಾಲ ಕೆರವಾಗಿ ನರಳಿದರೂ
ಬಿಡದ ಮಮಕಾರ
ಎಲ್ಲೆಲ್ಲೂ ಅಂಧಕಾರ?

ಸರಿ
ಈಗ ಅವಳ ಧಿಕ್ಕಾರದ
ದಾರಿಯೇ ಆಯಿತು
ಊರುಗೋಲು ಕೈಗಂದೀಲು!

ಜಗದ ಜಂಜಡವ ಕಳಚಿ
ಜೀವನ್ಮುಖಿಯಾಗುವುದಕೆ!
ಜೀವತತ್ವದಲೆ ನೆಲೆ ನಿಂತು
ಜೀವೋತ್ತಮನಾಗುವುದಕೆ!

ಹೋಗಿ ಬಾ ಗೆಳತಿ
ನಮಿಸುವೆ ನಿನಗೆ
ನರತತ್ವದ ಪೊರೆ
ಕಳಚಿದ
ಸರ್ಪವಾದುದಕೆ!

#ನೀ.ಶ್ರೀಶೈಲ ಹುಲ್ಲೂರು

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....