ಬಂಟ್ವಾಳ: ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಂದು ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ವಿವಿಧ ಅನುದಾನವನ್ನು ಬಳಕೆ ಮಾಡಿಕೊಂಡು ಹಂತಹಂತವಾಗಿ ಮಾಡಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಶಾಸಕರ 10 ಲಕ್ಷ ಅನುದಾನದಲ್ಲಿ ಬಡಗಬೆಳ್ಳೂರು ಗ್ರಾಮದ ಕಾಜಗುಳಿ ಅಂಬೋಡಿ ಮಾರು ರಸ್ತೆಯ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೆರವೇರಿಸಿ ಬಳಿಕ ಮಾತನಾಡಿದರು. ಅಭಿವೃದ್ಧಿಗೆ ಗ್ರಾಮದ ಜನರ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಬಡಗಬೆಳ್ಳೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ನಂದರಾಮ ರೈ, ಮಾಜಿ ಗ್ರಾ.ಪಂ.ಸದಸ್ಯ ರಮೇಶ್ ಬಟ್ಟಾಜೆ, ಗ್ರಾಮದ ಪ್ರಮುಖರಾದ ಪ್ರದೀಪ್ ಶೆಟ್ಟಿ ಬೆಳ್ಳೂರು ಪರಾರಿ, ಸಂಜೀವ ಶೆಟ್ಟಿ, ಭೊಜ ಶೆಟ್ಟಿ, ಸುಂದರ ಶೆಟ್ಟಿ, ಪ್ರಶಾಂತ ಶೆಟ್ಟಿ, ಬೃಜೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಮೋಜನ ಪಂಬದಬೆಟ್ಟು, ಮಹಾಬಲ ಅಂಗಡಿಗುತ್ತು, ಶ್ರೀನಿವಾಸ, ಬೇಬಿರಾಜ್ ಅಂಬೋಡಿಮಾರ್, ಗುತ್ತಿಗೆದಾರ ಮದ್ವರಾಜ್ ಜೈನ್, ಮಹಮ್ಮದ್, ಇಬ್ರಾಹಿಂ, ನವೀನ, ಪ್ರವೀಣ ತಂಬರಗುಡ್ಡೆ ಪ್ರಮುಖರಾದ ರಮನಾಥ ರಾಯಿ, ಸೀತರಾಮ ಪೂಜಾರಿ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು ಮತ್ತಿತರರು ಉಪಸ್ಥಿತರಿದ್ದರು.