ಬಂಟ್ವಾಳ: ಲೋಕೊಪಯೋಗಿ ಇಲಾಖೆ ಉಪ ವಿಭಾಗ ಬಂಟ್ವಾಳ ಇದರ ಒಂದು ಅಭಿವೃದ್ಧಿ ಯೋಜನೆಯಲ್ಲಿ 2ಕೋ.ರೂ ವೆಚ್ಚದಲ್ಲಿ ಬಂಟ್ವಾಳ ತಾ. ಸಂಗಬೆಟ್ಟು-ಕೊನೆರೊಟ್ಟು-ಮಾವಿನಕಟ್ಟೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸೋಮವಾರ ಸಿದ್ದಕಟ್ಟೆಯಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ರಾಜ್ಯ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರತ್ನ ಕುಮಾರ್ ಚೌಟ, ಐತಪ್ಪ ಆಳ್ವ, ಆನಂದ ಶೆಟ್ಟಿ ಕೊನೆರೊಟ್ಟು, ಸತೀಶ್ ಪೂಜಾರಿ ಹಲಕ್ಕೆ, ಸಂದೇಶ್ ಶೆಟ್ಟಿ, ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ರಶ್ಮಿತ್ ಶೆಟ್ಟಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಮಾಧವ ಶೆಟ್ಟಿಗಾರ್, ಮಂದಾರತಿ ಶೆಟ್ಟಿ, ಗಣೇಶ್ ಶೆಟ್ಟಿ, ಶ್ರೀಧರ ಶೆಟ್ಟಿ, ಉಮೇಶ್ ಗೌಡ, ಸಂಜೀವ ಶೆಟ್ಟಿ ಗುಂಡ್ಯಾರ್, ಸಂತೋಷ್ ರಾಯಿಬೆಟ್ಟು, ಜಯಕರ ಶೆಟ್ಟಿ ಬದ್ಯಾರು, ಅಮ್ಮು ಉಪ್ಪಿರ, ಪ್ರಶಾಂತ್ ಪೂಜಾರಿ, ಹರಿಪ್ರಸಾದ್ ಆಚಾರ್ಯ, ಹರೀಶ್ ಶೆಟ್ಟಿ, ಅಭಿಯಂತರಾದ ಷಣ್ಮುಗಂ, ಅರುಣ್ ಪ್ರಕಾಶ್, ಗುತ್ತಿಗೆದಾರ ಅಬ್ದುಲ್ ಖಾದರ್ ಮತ್ತಿತರರಿದ್ದರು.