ಬಂಟ್ವಾಳ: ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನ ಇದರ ಆವರಣ ಗೋಡೆ ಕುಸಿತ ವಿಚಾರಕ್ಕೆ ಸ್ಥಳೀಯ ಕೋರೆಗಳು ಕಾರಣ ಎನ್ನುವ ವಿಚಾರದಲ್ಲಿ ಎದ್ದಿರುವ ಸಮಸ್ಯೆಗಳ ಬಗ್ಗೆ ವಾದ ವಿವಾದಗಳ ವಿಚಾರದಲ್ಲಿ ಜಿ.ಪಂ ಸದಸ್ಯ ಶ್ರೀ ತುಂಗಪ್ಪ ಬಂಗೇರ ಇವರು ಕಾಣೆಯಾಗಿದ್ದಾರೆ ಎಂದು ಬಂಗೇರರ ಫೋಟೋಗಳನ್ನ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಇಂದು ಪುಂಜಾಲಕಟ್ಟೆ ಆರಕ್ಷಕ ಠಾಣೆಗೆ ಬಡಗ ತೆಂಕ ಕಜೆಕಾರ್, ಪುಂಜಾಲಕಟ್ಟೆ ಬಿಜೆಪಿ ಪ್ರಮುಖರ ಮೂಲಕ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ ಬಡಗಕಜೆಕಾರ್ ಮಾಜಿ ಪಂಚಾಯತ್ ಸದಸ್ಯರುಗಳಾದ, ಗಂಗಾಧರ ಪೂಜಾರಿ ಕಜೆಕಾರ್, ಸುರೇಶ್ ಬಾರ್ದೋಟ್ಟು, ಪ್ರವೀಣ್ ಗೌಡ ಮಾಡ ಮತ್ತು ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಸತೀಶ್ ಕಜೆಕಾರ್, ತೆಂಕಕಜೆಕಾರ್ ಬಿಜೆಪಿ ವಾರ್ಡ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಕರ್ಲ, ಬಿಜೆಪಿ ಯುವ ಮೋರ್ಚಾ ಸರಪಾಡಿ ಶಕ್ತಿ ಕೇಂದ್ರ,ಮಾಜಿ ಪ್ರಧಾನ ಕಾರ್ಯದರ್ಶಿ. ಪ್ರವೀಣ್ ಮಾಡ ಹಿಂದೂ ಜಾಗರಣ ವೇದಿಕೆ ಮಾಡ, ಅಧ್ಯಕ್ಷ ಪ್ರದೀಪ್, ಹಾಗೂ ಚಿದಾನಂದ ಮಾಣಿಂಜ, ಪ್ರಕಾಶ್ ಮಂಜಲ್ ಪಳಿಕೆ, ಬಿಜೆಪಿ ಪ್ರಮುಖರಾದ ವಸಂತ್ ಕೋಟ್ಯಾನ್ ಅಪ್ಪಾಲು, ಪಿ ಎಂ ಪ್ರಭಾಕರ ಪುಂಜಾಲಕಟ್ಟೆ , ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಪ್ರಭು, ಯೋಗೀಶ್ ಪುಳಿಮಜಲು, ಪ್ರಶಾಂತ್ ಮಾಣಿಂಜ ಹಾಗೂ ಬಿಜೆಪಿ ಪ್ರಮುಖರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.