Sunday, October 22, 2023

ಬೆಳ್ತಂಗಡಿ ಜನತೆಗೆ ದೀಪಾವಳಿ ದೋಸೆ ಹಬ್ಬ

Must read

ಬೆಳ್ತಂಗಡಿ: ಬೆಳ್ತಂಗಡಿ ಮಂಡಲದ ಬಿಜೆಪಿ ಯುವಮೋರ್ಚಾ ವತಿಯಿಂದ ಕ್ಷೇತ್ರದ ಶಾಸಕ ಹರೀಶ್ ಪೂಂಜಾರವರ ಕಲ್ಪನೆಯಂತೆ ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ನ.14 ರಂದು ಬೆಳಿಗ್ಗೆ ಘಂಟೆ 8ರಿಂದ ಸಂಜೆ 6 ರವರೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ “ದೀಪಾವಳಿ ದೋಸೆ ಹಬ್ಬ” ಮತ್ತು ಸಂಜೆ 6ಘಂಟೆಗೆ “ಗೋಪೂಜೆ“ಕಾರ್ಯಕ್ರಮ ನಡೆಯಲಿದೆ.

ತುಳುನಾಡಿನ ವಿಶೇಷವೆಂಬಂತೆ ದೀಪಾವಳಿ ಸಂಧರ್ಭದಲ್ಲಿ ತುಳುನಾಡಿನ ಮನೆ -ಮನೆಯಲ್ಲೂ ಹುಳಿ ದೋಸೆಯದ್ದೇ ಹವಾ, ದೀಪಾವಳಿ ಸಂಧರ್ಭದಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಹುಳಿ ದೋಸೆಯು ವಿಶೇಷ ಮಾನ್ಯತೆಯನ್ನು ಪಡೆದಿದೆ. ಬದಲಾದ ಯಾಂತ್ರಿಕ ಜಗತ್ತಿನಲ್ಲಿ ತುಳುನಾಡಿನ ಸಾಂಪ್ರದಾಯಿಕ ಪದ್ಧತಿಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಎಲ್ಲಾ ಯುವ ಸಮೂಹ ಮತ್ತು ಸಮಾಜದ ಬಂಧುಗಳನ್ನು ಸೇರಿಸಿ ದೋಸೆ ಹಬ್ಬ ನಡೆಯುತ್ತಿದೆ.

More articles

Latest article