ಬಂಟ್ವಾಳ: ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ.) ಮಾಡ ಬಡಗಕಜೆಕಾರು ಬಂಟ್ವಾಳ ಇದರ ವತಿಯಿಂದ ಮಂಡಳಿಯ ಗೌರವಾಧ್ಯಕ್ಷ ಸುಧಾಕರ್ ಶೆಣೈ ಖಂಡಿಗ ಇವರ ಮುಂದಾಳತ್ವದಲ್ಲಿ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಮಾಡ, ಅಧ್ಯಕ್ಷ ಕೃಷ್ಣಪ್ಪ ಮಾಡ ಇವರ ಉಸ್ತುವಾರಿಯಲ್ಲಿ ಹಾಗೂ ಊರಿನ ಸಮಾಜ ಸೇವಕರಿಂದ ಮಾಡ- ಬೆರ್ಕಳ ವರೆಗೆ ಸ್ವಚ್ಚ ಭಾರತ್ ಕಾರ್ಯಕ್ರಮದ ಪ್ರೇರಣೆ ಮೂಲಕ ಮಾರ್ಗದ ಎರಡು ಬದಿ ಸ್ವಚ್ಛ ಮಾಡುವ ಮೂಲಕ ವಾಹನ ಸಂಚಾರಕ್ಕೆ ಅಡೆ ತಡೆಯಾಗುತ್ತಿದ್ದ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಈ ಶ್ರಮದಾನದಲ್ಲಿ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಿರಿಯರು, ಭಾಗವಹಿಸಿದರು.