Thursday, October 19, 2023

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎo. ಸುಬ್ರಮಣ್ಯ ಭಟ್ ರವರಿಗೆ ವಿವಿದೆಡೆ ಸನ್ಮಾನ

Must read

ಬಂಟ್ವಾಳ: :2020ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಜಿಪ ಮಗಣೆ ತಂತ್ರಿ ಎo. ಸುಬ್ರಮಣ್ಯ ಭಟ್ ರವರಿಗೆ ಸಜೀಪಗುತ್ತು ಶ್ರೀ ನಾಲ್ಕೈತ್ತಾಯ ದೈವದ ಚಾವಡಿಯಲ್ಲಿ ಜರಗಿದ ದೀಪಾವಳಿ ಹಬ್ಬದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸಜೀಪಗುತ್ತು ಗಡಿ ಪ್ರಧಾನರಾದ ಕೋಚು ಬಂಡಾರಿ ಯಾನೆ ಮುಂಡಪ್ಪ ಶೆಟ್ಟಿ ಸನ್ಮಾನಿಸಿದರು. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ 40ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಥೆ ಹತ್ತನೇ ಉದ್ಯಾಪನ ಧಾರ್ಮಿಕ ಸಮಾರಂಭದಲ್ಲಿ ನೆನಪಿನ ಕಾಣಿಕೆ ಫಲಪುಷ್ಪಗಳನಿತ್ತು, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶ್ರೀ ದೇವಳದ ಪ್ರಧಾನ ಅರ್ಚಕ ಮಹೇಶ್ ಭಟ್ ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕ ಪರಿಷತ್ತಿನ ಅಧ್ಯಕ್ಷ ವೇದಮೂರ್ತಿ ಶಿವರಾಮ ಮಯ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ತು ಜಿಲ್ಲಾ ಅಧ್ಯಕ್ಷ ವೇದಮೂರ್ತಿ ಪಿ. ಕೃಷ್ಣರಾಜ ಭಟ್, ಸಜಿಪನಡು ಶನ್ಮುಖ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್, ಬಿ.ಕೆ. ರಾಜ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

More articles

Latest article