Saturday, October 21, 2023

ಅ.18: ’ತಿರುಗುಭಾಣ’ ಕೃತಿ ಬಿಡುಗಡೆ

Must read

ಬಂಟ್ವಾಳ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಬಂಟ್ವಾಳ ಕನ್ನಡ ಕಲ್ಹಣ ನೀರ್ಪಾಜೆ ಭೀಮಭಟ್ಟರ ಅಭಿಮಾನಿ ಬಳಗ, ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿತ ಕೃತಿ ’ತಿರುಗುಭಾಣ’ ಬಿಡುಗಡೆ ಕಾರ್ಯಕ್ರಮ ಅ.18ರ ಆದಿತ್ಯವಾರ ಬಿ.ಸಿ.ರೋಡ್ ಪೊಲೀಸ್ ಲೈನ್ ನ ಶ್ರೀ ಅನ್ನಪೂರ್ಣೆಶ್ವರೀ ದೇವಾಲಯದ ವಠಾರದಲ್ಲಿ ಸಂಜೆ 3.30ಕ್ಕೆ ಜರಗಲಿದೆ.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜೆಕಳ ವಹಿಸಲಿರುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕೃತಿ ಅನಾವರಣಗೊಳಿಸಲಿರುವರು. ಮುಖ್ಯ ಅತಿಥಿಯಾಗಿ ಮಂಗ್ಲಿಮಾರ್‍ ಅಣ್ಣಪ್ಪ ಸ್ವಾಮಿ, ಜುಮಾದಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ಆಗಮಿಸಲಿರುವರು. ಪ್ರೋ. ರಾಜಮಣಿ ರಾಮಕುಂಜ ಲೇಕಕರ ಮಾತುಗಳನ್ನಾಡಲಿರುವರು ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಂಟ್ವಾಳ ಕನ್ನಡ ಕಲ್ಹಣ ನೀರ್ಪಾಜೆ ಭೀಮಭಟ್ಟರ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

More articles

Latest article