ವಿಟ್ಲ: ಎಸ್.ಕೆ.ಎಸ್.ಎಸ್.ಎಫ್. ಕೋಡಪದವು ಶಾಖೆಯ ನವೀಕೃತ ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಿತು.
ಮಂಗಳೂರು ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಕಚೇರಿ ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿ, ಪ್ರವಾದಿ ಅವರ ಸಂದೇಶ ನೀಡಿ ಮಾತನಾಡಿ ಪ್ರತಿಯೊಬ್ಬರು ಪ್ರವಾದಿ ಅವರ ಜೀವನ ಹಾಗೂ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಂಟ್ವಾಳ ವಲಯ ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮೌಲಿದ್ ನೇತೃತ್ವ ನೀಡಿದರು. ಕೆಲಿಂಜ ಜುಮಾ ಮಸೀದಿ ಖತೀಬು ಅಬ್ಬಾಸ್ ದಾರಿಮಿ ಮಜ್ಲಿಸುನ್ನೂರು ಗೆ ನೇತೃತ್ವ ನೀಡಿದರು. ಕೋಡಪದವು ಶಾಖೆ ಎಸ್ಕೆಎಸ್ಎಸ್ಎಫ್ ಕಟ್ಟಡಕ್ಕೆ ಸ್ಥಳದಾನ ಮಾಡಿದ ಅಬ್ದುಲ್ ರಹಿಮಾನ್ ಹಾಜಿ ಕಂಪದಬೈಲು ಅವರನ್ನು ತ್ವಾಕ ಉಸ್ತಾದ್ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ರಫೀಕ್ ಮುಸ್ಲಿಯಾರ್ ಕಡಂಬು, ಅಶ್ರಫ್ ಮಾಣಿಮಜಲು, ರಫೀಕ್ ಫೈಝಿ ಕುಕ್ಕಿಲ, ಯೂಸುಫ್ ಹಾಜಿ ಕೋಡಪದವು, ಅಬ್ದುರ್ರಹ್ಮಾನ್ ಹಾಜಿ ಕಂಪದಬೈಲು, ಅಬ್ದುಲ್ಲ ಹಾಜಿ ಕುಕ್ಕಿಲ, ಸಿದ್ದಿಕ್ ಸರವು, ಕರೀಂ ಕಂಪದಬೈಲು, ನೌಶಾದ್ ಬೋಳಂತೂರು, ಇಲ್ಯಾಸ್ ಸರವು, ಸಿದ್ದೀಕ್ ಹನೀಫಿ ಕೋಡಪದವು, ಸಮ್ಮಾಸ್ ಕಂಪದಬೈಲು, ಜಮಾಲ್ ಸರವು, ಶರೀಪ್ ಕೆಲಿಂಜ ಮೊದಲಾದವರು ಉಪಸ್ಥಿತರಿದ್ದರು.