ಬಂಟ್ವಾಳ : ಹಾರ್ಡ್ವೇರ್ ಅಂಗಡಿಯೊಂದಕ್ಕೆ ತಂಡವೊಂದು ನುಗ್ಗಿ ಅಂಗಡಿಯಲ್ಲಿದ್ದ ಸಾಮಾಗ್ರಿಗಳನ್ನು ಹೊರಕ್ಕೆ ಎಸೆದು ದಾಂಧಲೆ ನಡೆಸಿದ ಘಟನೆ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಶಂಕರ್ ನಾರಾಯಣ್ ಕಾರಂತ್ ಎಂಬವರ ಮಾಲಕತ್ವದಅಂಗಡಿ ಇದಾಗಿದ್ದು, ಅ.31ರಂದು ಬೆಳಿಗ್ಗೆ ಸುಮಾರು 20 ಜನರ ತಂಡ ಏಕಾಏಕಿ ಅಂಗಡಿಯೊಳಗಡೆ ನುಗ್ಗಿ ಪೈಂಟ್ ಮತ್ತು ಇನ್ನಿತರ ವಸ್ತುಗಳನ್ನು ಎಸೆಯುತ್ತಿದ್ದು, ಬಲತ್ಕಾರವಾಗಿ ಅಂಗಡಿಯನ್ನು ವಶಕ್ಕೆ ಪಡೆಯಲು ಮುಂದಾಗಿತ್ತು ಎನ್ನಲಾಗಿದೆ. ಇದನ್ನು ಕಂಡ ಸ್ಥಳೀಯರು ಮದ್ಯ ಪ್ರವೇಶಿಸಿ ತಂಡವನ್ನು ತಡೆದು ಸಮಾದಾನಿಸಲು ಯತ್ನಿಸುತ್ತಿದ್ದಂತೆ ತಂಡ ಸಾರ್ವಜನಿಕರ ಮೇಲೆರಗಲು ಮುಂದಾಯಿತು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ತಂಡ ಪರಾರಿಯಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.