ವಿಟ್ಲ: ಪೆರ್ಲ-ನಲ್ಕದ ಸಮೀಪ ಕಲ್ಲುಕುಟ್ಟಿಮೂಲೆಯಲ್ಲಿ ನವರಾತ್ರಿಯ ಸಂದರ್ಭದಲ್ಲಿ ತ್ರಿಕಾಲ ಪೂಜೆ ಮತ್ತು ‘ವೀರಮಣಿ ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಪಾರೆಕೋಡಿ ಗಣಪತಿ ಭಟ್, ಬಟ್ಯಮೂಲೆ ಲಕ್ಷ್ಮೀ ನಾರಾಯಣ ಭಟ್, ಪುತ್ತೂರು ರಮೇಶ ಭಟ್, ಚಿನ್ಮಯ ಕೃಷ್ಣ ಅಡ್ಯನಡ್ಕ, ದಂಬೆ ಈಶ್ವರ ಶಾಸ್ತ್ರಿ, ಶ್ರೀಪತಿ ನಾಯಕ್ ಆಜೇರು, ವಧ್ವ ರಾಮಪ್ರಸಾದ್, ವರ್ಷಿತ್ ಕಿಜೆಕ್ಕಾರು, ಕಲ್ಲುಕುಟ್ಟಿಮೂಲೆ ನರಸಿಂಹ ಭಟ್ ಸಹಕರಿಸಿದರು.
ಅರ್ಥಧಾರಿಗಳಾಗಿ ಕೀರಿಕ್ಕಾಡು ಗಣೇಶ್ ಶರ್ಮ, ಪಕಳಕುಂಜ ಶ್ಯಾಮ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು, ಸಚ್ಚಿದಾನಂದ ಪ್ರಭು ಆಜೇರು, ದೇವರಗುಂಡಿ ರಾಮಚಂದ್ರ ಭಟ್, ಎಲ್.ಎನ್.ಭಟ್ ಮಳಿ ಭಾಗವಹಿಸಿದರು.
ವೇ.ಮೂ.ಕಲ್ಲುಕುಟ್ಟಿಮೂಲೆ ರವಿಶಂಕರ್ ಭಟ್ ಕಲಾವಿದರಿಗೆ ಶ್ರೀದೇವಿಯ ಪ್ರಸಾದ ನೀಡಿ ಆಶೀರ್ವದಿಸಿದರು.