ವಿಟ್ಲ: ವಿಟ್ಲ ಕಾಶಿಮಠ ಶ್ರೀಕಾಶೀ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ದಿವಾಕರ ನಾಯ್ಕ್ ಅವರು ಆಯ್ಕೆಗೊಂಡಿದ್ದಾರೆ.
ಇತ್ತೀಚೆಗೆ ಕೇಶವ ವಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಬಾಬು ಕೆ.ವಿ, ಕಾರ್ಯದರ್ಶಿಯಾಗಿ ಮನೋಜ್ ಕುಮಾರ್, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಮತ್ತು ಗಣೇಶ್ ಜೋಗಿ, ಜತೆ ಕಾರ್ಯದರ್ಶಿಯಾಗಿ ವರುಣ್ ಕಾಶಿಮಠ, ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ ಕೊಪ್ಪಳ, ಕ್ರೀಡಾಕಾರ್ಯದರ್ಶಿಯಾಗಿ ವಿನೋದ್, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಕುಮಾರ್, ಮತ್ತು ಸುದೇಶ್ ಕಾಶಿಮಠ, ಸಂಚಾಲಕರಾಗಿ ಕೇಶವ ವಿ.ಕೆ ಮತ್ತು ವಿಜಯಕುಮಾರ್, ಗೌರವ ಸಲಹೆಗಾರರಾಗಿ ತಾರಾನಾಥ ಕಬ್ಬಿನಹಿತ್ಲು, ಮತ್ತು ಲಕ್ಷ್ಮಣ್ ಆರ್.ಎಸ್ ಅವರನ್ನು ಆಯ್ಕೆ ಮಾಡಲಾಯಿತು.