ಬಂಟ್ವಾಳ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ವಿಷ್ಣುನಗರ ಮತ್ತು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಇಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 5ನೇ ಬಾರಿಯ ರಕ್ತದಾನ ಶಿಬಿರ ನಡೆಯಿತು. 50 ಸ್ವಯಂಸೇವಕರು ರಕ್ತದಾನ ಮಾಡಿದರು.
ಈ ಸಂಧರ್ಭದಲ್ಲಿ ಶ್ರೀ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ರಾಮಚಂದ್ರ ಭಟ್ ಪುತ್ತೂರು, ಶ್ರೀ ಯೋಗೀಶ್ ಕುಡ್ವ, ದಯಾನಂದ ಶೆಟ್ಟಿ ಉಜಿರೆಮಾರು, ಗೋವಿಂದರಾಜ್ ಭಟ್ ಪೆರ್ವಾಜೆ, ಚಿದಾನಂದ ಪೆಲತ್ತಿಂಜ, ಕೃಷ್ಣಪ್ಪ ಗೌಡ ಅಡ್ಯಾಲು, ಆನಂದ ಮಾನಾಜೆಮೂಲೆ ಹಾಗೂ ಯುವಕವೃಂದದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.