ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆಯಲ್ಲಿರುವ ‘ಚಿಕಿತ್ಸಾ ಕ್ಲಿನಿಕ್’ ನ ಬಡವರ ಡಾಕ್ಟರ್ ಎಂದೇ ಊರಿನೆಲ್ಲೆಡೆ ಚಿರಪರಿಚಿತರಾಗಿರುವ ಡಾ| ವೇಣುಗೋಪಾಲ್ ಶರ್ಮಾ ರಿಗೆ ರಾಜ್ಯ ಸರಕಾರದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಗುರುವಾಯನಕೆರೆಯಲ್ಲಿ ಆಸ್ಪತ್ರೆ ನಿರ್ಮಿಸಿ ಬಡಜನರ ಪಾಲಿಗೆ ಉಚಿತ ಚಿಕಿತ್ಸೆ ನೀಡುತ್ತ, ಜನರ ಸೇವಯನ್ನು ಮಾಡಿದ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.