Sunday, October 22, 2023

ಬೆಳ್ತಂಗಡಿಯ ಹಿರಿಯ ಉದ್ಯಮಿ ರಮಾನಂದ ಸಾಲ್ಯಾನ್ ವಿಧಿವಶ

Must read

ಬೆಳ್ತಂಗಡಿ: ರಾಜಾರಾಮ್ ಏಜೆನ್ಸಿ ಹಾಗು ಅನ್ನಪೂರ್ಣ ಮೆಟಲ್ಸ್ ಇದರ ಮಾಲಕರಾಗಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದ ಹಿರಿಯ ಉದ್ಯಮಿಯಾಗಿರುವ ರಮಾನಂದ್ ಸಾಲ್ಯಾನ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಇವರು ಕಲಾಕ್ಷೇತ್ರದಲ್ಲಿಯೂ ಆಸಕ್ತಿಯನ್ನು ಇಟ್ಟುಕೊಂಡಿದ್ದು ಕಲಾವಿದರನ್ನು ಪ್ರೋತ್ಸಾಹಿಸುತಿದ್ದರು ಹಾಗು ಅನೇಕ ಸಂಘ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸಿದ ಇವರು ಎಲ್ಲರ ಪ್ರೀತಿ ಪಾತ್ರರಾಗಿದ್ದರು.

ಮೃತರು ಪುತ್ರ , ಪುತ್ರಿ ಹಾಗು ಬಂಧು ಬಳಗದವರನ್ನು ಅಗಲಿದ್ದಾರೆ.

More articles

Latest article