Friday, October 27, 2023

“ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದಕ್ಕೆ ಸಾಕ್ಷಿಯಾಗಿರುವ ಚಾರ್ಮಾಡಿಯ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು

Must read

ಬೆಳ್ತಂಗಡಿ: ಚಾರ್ಮಾಡಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರ ತಂಡದ ಸಮಾಜ ಸೇವಾ ಕಾರ್ಯ

ಪರ್ಲಣಿಯ ಗಿರಿಜಾ ಎಂಬವರ ಮನೆಯಲ್ಲಿ ಕಳೆದ ಬಾರಿಯ ನೆರೆಯ ಅವಾಂತರಕ್ಕೆ ಅಕ್ಷರಶಃ ಸಂಪೂರ್ಣ ಹಾನಿಯಾಗಿದ್ದು, ಸ್ವಲ್ಪ ಮಟ್ಟಿಗೆ ಅದನ್ನು ಸರಿ ಮಾಡಿ ಕೊಟ್ಟಿದ್ದರು. ಆದರೂ ಇನ್ನೂ ಮನೆಯ ಸುತ್ತಲೂ ಹೂಳು ತುಂಬಿದ್ದು, ಬಾವಿಯು ಮುಚ್ಚಿಹೋಗಿದ್ದು, ಭಜರಂಗದಳದ ಕಾರ್ಯಕರ್ತರಿಂದ ಬಾವಿಯ ಮರು ರಚನೆ ಮಾಡಲಾಯಿತು۔

ಸ್ನಾನ ಗೃಹ ಹಾಗೂ ಶೌಚಾಲಯದ ನಿರ್ಮಾಣಕ್ಕೆ ಪಂಚಾಂಗ ನಿರ್ಮಿಸಲು ಕಲ್ಲನ್ನು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ ಇವರ ಟೆಂಪೋ ಮೂಲಕ ಹೊಳೆಯಿಂದ ಸಾಗಿಸಲಾಯಿತು.

ಸುಮಾರು 25 ಜನ ಕಾರ್ಯಕರ್ತರು ಈ ಶ್ರಮದಾನದಲ್ಲಿ ಭಾಗವಹಿಸಿದರು. ಈ ಶ್ರಮದಾನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ನಾರಾಯಣ ರಾವ್ ಮಠದ ಮಜಲು ಉಪಸ್ಥಿತರಿದ್ದರು.

 

More articles

Latest article