Tuesday, October 17, 2023

ನಾಟ್ಯಲಹರಿ ನೃತ್ಯ ತಂಡದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Must read

ಬಂಟ್ವಾಳ: ಯಕ್ಷಗಾನ, ನಾಟ್ಯ ತರಭೇತಿ, ರಂಗ ಪರಿಕರ ಒದಗಿಸುವ ಕಾವಳಕಟ್ಟೆ ಬಿ.ಸಿ.ರೋಡ್ ನ ಶ್ರುತಿ ಆರ್ಟ್ಸ್ ಕಾವಳಕಟ್ಟೆ ಇದರ ವತಿಯಿಂದ ಇದರ ಸಹಸಂಸ್ಥೆ ನಾಟ್ಯಲಹರಿ ನೃತ್ಯ ತಂಡದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಸಾಧಕ ಸದಸ್ಯರಿಗೆ ಸಮ್ಮಾನ ಕಾರ್ಯಕ್ರಮ ಕಾವಳಕಟ್ಟೆಯ ನಾಟ್ಯಲಹರಿ ಸಭಾಂಗಣದಲ್ಲಿ ಜರಗಿತು.

ನಾಟ್ಯಲಹರಿ ನೃತ್ಯ ತಂಡದ ಸದಸ್ಯರಾದ ಹನಿಶ್ರೀ, ಕಾರ್ತಿಕ್ ದಾಸ್, ಚೈತ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯಕ್ ರಾಯಿ, ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಆರಕ್ಷಕರಾದ ಶ್ಯಾಮ್ ಮಾನೆ, ಚಿಣ್ಣರ ಮಿಲನ ಯಕ್ಷಚಾವಡಿ ಬಂಟ್ವಾಳ ಇಲ್ಲಿನ ಅಧ್ಯಕ್ಷರು ಸುಭಾಶ್ಚಂದ್ರ ಜೈನ್, ನಾಟಕ ರಚನೆಗಾರ ಬಾಲಕೃಷ್ಣ ಅಂಚನ್, ಶ್ರುತಿ ಆರ್ಟ್ಸ್ ಸಂಸ್ಥೆಯ ಸಂಸ್ಥಾಪಕ ದಿವಾಕರ್ ದಾಸ್ ಕಾವಳಕಟ್ಟೆ, ಜಯಂತಿ ದಾಸ್ ಮತ್ತು ನಾಟ್ಯಲಹರಿ ತಂಡದ ನಿರ್ದೇಶಕಿ ಶ್ರುತಿ ದಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More articles

Latest article