ಬಂಟ್ವಾಳ: ವಿಧಾನಸಭಾ ಕ್ಷೇತ್ರ ಎಸ್.ಟಿ. ಮೋರ್ಚಾದ ನೂತನ ಪದಾದಿಕಾರಿಗಳ ಘೋಷಣೆ ಹಾಗೂ ಕಾರ್ಯಕಾರಿಣಿ ಸಭೆ ಬಂಟ್ವಾಳದ ಭಾಜಪ ಕಛೇರಿಯಲ್ಲಿ ಜರುಗಿತು.
ಈ ಸಭೆಯಲ್ಲಿ ದ.ಕ. ಬಿಜೆಪಿಯ ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಭಾರಿ ಜಯಶ್ರೀ ಕರ್ಕೇರ. ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು ಬೆಳ್ತಂಗಡಿ, ಬಂಟ್ವಾಳ ಮಂಡಲದ ಅದ್ಯಕ್ಷ ದೇವಪ್ಪ ಪೂಜಾರಿ, ಉಪಾದ್ಯಕ್ಷರುಗಳಾದ ಚಿದಾನಂದ ರೈ ಹಾಗೂ ಜಯರಾಮ ನಾಯ್ಕ ಕುಂಟ್ರಕಲ, ಬಂಟ್ವಾಳ ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ಡೊಂಬಯ್ಯ ಅರಳ ಹಾಗು ರವೀಶ್ ಶೆಟ್ಟಿ ಕರ್ಕಳ, ದ.ಕ. ಜಿಲ್ಲಾ ಎಸ್.ಟಿ. ಮೋರ್ಚಾ ಉಪಾದ್ಕಕ್ಷರುಗಳಾದ ವಿಠಲ್ ನಾಯ್ಕ್ ಬಾಳ್ತಿಲ ಹಾಗು ಸೀತಾನಂದ ನಾಯ್ಕ ಬೇರ್ಪಡ್ಕ ಸುಳ್ಯ ಹಾಗು ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಲೋಕೇಶ್ ಯನ್. ಎರ್ಮೆನಾಡ್, ಉಪಸ್ಥಿತರಿದ್ದರು.
ಕ್ಷೇತ್ರ ಎಸ್.ಟಿ. ಮೋರ್ಚಾದ ಪದಾಧಿಕಾರಿಗಳಾಗಿ, ಅಧ್ಯಕ್ಷರಾಗಿ ರಾಮ ನಾಯ್ಕ ಕುಕ್ಕಿನಾರು, ಉಪಾಧ್ಯಕ್ಷರುಗಳಾಗಿ ಕೆ.ಟಿ. ನಾಯ್ಕ್ ಮಾಣಿ ಹಾಗು ಜಯ ನಾಯ್ಕ್ ಮಣಿನಾಲ್ಕೂರು, ಪ್ರಧಾನಕಾರ್ಯದರ್ಶಿಯಾಗಿ ಯಶವಂತ ನಾಯ್ಕ ನಗ್ರಿ, ಕೋಶಾಧಿಕಾರಿಯಾಗಿ ಸತೀಶ ನಾಯ್ಕ ಕೊಳ್ನಾಡು, ಕಾರ್ಯದರ್ಶಿಯಾಗಿ ಹರೀಶ ನಾಯ್ಕ ನೆಕ್ಕರೆ ಇವರುಗಳನ್ನು ಆಯ್ಕೆ ಮಾಡಿ, ಘೋಷಣೆ ಮಾಡಲಾಯ್ತು.
ಮೊದಲಿಗೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನದ ಮುಖಾಂತರ ಸಭೆಗೆ ಚಾಲನೆ ನೀಡಲಾಯಿತು.
ಭಾರತ ರತ್ನ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯ ಸ್ಮರಣೆ ಕಾರ್ಯ ನಡೆಸಲಾಯ್ತು.
ದ.ಕ.ಜಿಲ್ಲಾ ಎಸ್.ಟಿ. ಮೋರ್ಚಾ ಉಪಾದ್ಕಕ್ಷ ವಿಠಲ್ ನಾಯ್ಕ್ ಬಾಳ್ತಿಲ ಸ್ವಾಗತಿಸಿ, ಎಸ್.ಟಿ.ಮೋರ್ಚಾ ಸಮಿತಿಯ ಜಯರಾಮ ನಾಯ್ಕ ಕುಂಟ್ರಕಲ ವಂದಿಸಿದರು.