ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪೆರಳ್ದಕಟ್ಟೆಯ ಮಂಜೊಟ್ಟಿ ತಿರುವು ಬಳಿ ಭಾರಿ ಗಾತ್ರದ ಮರ ಉರುಳಿ ವಿದ್ಯುತ್ ಕಂಬ ತಂತಿಗಳು ವಾಲಿದ್ದು, ಅಬೂಬಕ್ಕರ್ ಎಂಬುವವರ ಚಲಿಸುತಿದ್ದ ಆಟೋ ರಿಕ್ಷಾ ಮೇಲೆ ಬಿದ್ದು ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮೆಸ್ಕಾ ಸಿಬ್ಬಂದಿ ಶೀಘ್ರವೇ ಸ್ಥಳಕ್ಕೆ ಆಗಮಿಸಿ, ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.