ಬೆಳ್ತಂಗಡಿ: ತಾಲೂಕಿನ ವೇಣೂರು ಕರಿಮಣೇಲು ಎಂಬಲ್ಲಿ 11 ವರ್ಷಗಳಿಂದ ಪಾಳುಬಿದ್ದಿರುವ ಗದ್ದೆಯನ್ನು ಶಾಲೆಗೆ ಹೋಗುವ ಮಕ್ಕಳು ಉಳುಮೆ ಮಾಡಿ ಮಾದರಿಯಾಗಿದ್ದಾರೆ.
ಅಜ್ಜ ನೋಡಿಕೊಳ್ಳುತಿದ್ದ ಗದ್ದೆ ಅಜ್ಜನ ಸಾವಿನ ನಂತರ ಪಾಳು ಬಿದ್ದಿತ್ತು.ಈ ಮಕ್ಕಳು ತಾವೇ ಟ್ರಾಕ್ಟರ್ ತರಿಸಿ ಉಳುಮೆ ಮಾಡಿಸಿ ಹಣವನ್ನು ತಾವೇ ನೀಡಿ ಬೇಸಾಯ ಮಾಡುವ ಆಸಕ್ತಿಯನ್ನು ತೋರಿದ್ದಾರೆ.
15 ವರುಷ ಪ್ರಾಯದ ಸುಕೇಶ್ ಹಾಗು ಜ್ಞಾನೇಶ್ ಪಾಳುಬಿದ್ದ ಗದ್ದೆಯ ಬೇಸಾಯ ಮಾಡಲು ಆಸಕ್ತಿ ತೋರಿದ ಪುಟ್ಟ ಮಕ್ಕಳು. ತನ್ನ ತಾಯಿ ಹಾಗು ಅಕ್ಕಂದಿರ ಮಾರ್ಗದರ್ಶನದಂತೆ ಈ ಮಕ್ಕಳು ಬೇಸಾಯದ ಮೊದಲ ಹಂತ ಗದ್ದೆ ಉಳುಮೆಯನ್ನು ಮಾಡಿದ್ದಾರೆ.