Thursday, October 19, 2023

ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ತೇಪೆ ಕಾರ್ಯ

Must read

ಬಂಟ್ವಾಳ: ರಾಷ್ಟೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ತೇಪೆ ಕಾರ್ಯವನ್ನು ಪ್ರಾರಂಭಿಸಿದ್ದು, ಗುರುವಾರ ಬಿ.ಸಿ.ರೋಡಿನಲ್ಲಿ ಹೊಂಡಗಳಿಗೆ ತೇಪೆ ಹಾಕಿ ಮುಚ್ಚಲಾಯಿತು.

ಬಿ.ಸಿ.ರೋಡಿನಲ್ಲಿ ಹೆದ್ದಾರಿಯಲ್ಲಿ ಕೆಲವೊಂದು ಕಡೆ ಬೃಹತ್ ಹೊಂಡಗಳು ಕಾಣಿಸಿಕೊಂಡ ಪರಿಣಾಮ ಅಪಾಯ ಪರಿಸ್ಥಿತಿ ಉಂಟಾಗಿತ್ತು. ಜತೆಗೆ ಕೆಲವೊಂದು ಬೈಕ್ ಸವಾರರು ಬಿದ್ದಿರುವ ಘಟನೆಗಳು ಕೂಡ ನಡೆದಿದೆ. ಹೀಗಾಗಿ ಹೆದ್ದಾರಿ ಮಧ್ಯದಲ್ಲೇ ಬ್ಯಾರಿಕೇಡ್ ಅಡ್ಡಲಾಗಿ ಇಡಲಾಗಿತ್ತು.
ಪ್ರಾಧಿಕಾರ ತೇಪೆ ಕಾರ್ಯ ಪ್ರಾರಂಭಿಸಿದ್ದು, ಬಿ.ಸಿ.ರೋಡಿನಿಂದ ನೆಲ್ಯಾಡಿ ಭಾಗದವರೆಗೂ ತೇಪೆ ಕಾರ್ಯ ನಡೆಸುವ ಕುರಿತು ಕಾಮಗಾರಿ ನಿರ್ವಹಿಸುವ ಕಾರ್ಮಿಕರು ತಿಳಿಸಿದ್ದಾರೆ.

More articles

Latest article