Tuesday, October 17, 2023

ಅರಣ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರಾಜೇಶ್ ಬಳಿಗಾರ್

Must read

ಬಂಟ್ವಾಳ: ಬಂಟ್ವಾಳ ಸಾಮಾಜಿಕ ಅರಣ್ಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ರಾಜೇಶ್ ಬಳಿಗಾರ್ ಅವರು ಪ್ರಾದೇಶಿಕ ವಲಯಕ್ಕೆ ವರ್ಗಾವಣೆಗೊಂಡು ಬಂಟ್ವಾಳ ವಲಯ ಅರಣ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬಂಟ್ವಾಳ ವಲಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ಸುರೇಶ್ ಅವರು ವರ್ಗಾವಣೆಗೊಂಡ ಬಳಿಕ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಅವರು ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಸ್ತುತ ಅರಣ್ಯ ಇಲಾಖೆಯು ರಾಜೇಶ್ ಬಳಿಗಾರ್ ಅವರು ಪ್ರಾದೇಶಿಕ ವಲಯಕ್ಕೆ ವರ್ಗಾವಣೆಗೊಳಿಸಿದ್ದು, ಸಾಮಾಜಿಕ ಅರಣ್ಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಮುಂದುವರಿದಿದ್ದಾರೆ.

More articles

Latest article