ಬಂಟ್ವಾಳ: ಸಿದ್ದಕಟ್ಟೆಯ ಸಂಗಬೆಟ್ಟು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದ ಅವಿವಾಹಿತ ಅಣ್ಣ-ತಂಗಿ ಸಾವು ಪ್ರಕರಣ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಸಂಗಬೆಟ್ಟು ನಿವಾಸಿಗಳಾದ ನೀಲಯ್ಯ ಶೆಟ್ಟಿಗಾರ್ (42)ಮತ್ತು ಕೇಸರಿ (39) ಮೃತಪಟ್ಟ ದುರ್ದೈವಿಗಳು.
ನೀಲಯ್ಯ ಮತ್ತು ಕೇಸರಿ ಅವರು ಇಬ್ಬರು ಅಣ್ಣ ತಂಗಿಯರಾಗಿದ್ದು, ಒಂದೇ ಕೊಠಡಿಯ ಮಂಚದಲ್ಲಿ ಸುಟ್ಟು ಕರಕಲಾಗಿದ್ದು ಬೊರಲು ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮನೆಯಲ್ಲಿ ನೀಲಯ್ಯ ಮತ್ತು ಕೇಸರಿ ಅವರ ಅಣ್ಣ ಅತ್ತಿಗೆ ಮತ್ತು ಅವರ ಮಗ ಇದ್ದಾರೆ. ಇವರು ಕೋಣೆಯಲ್ಲಿ ಮಲಗಿದ್ದ ವೇಳೆ ಶಬ್ಬ ಕೇಳಿ ಓಡಿ ಬಂದು ನೋಡಿದಾಗ ಕೋಣೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮತ್ತು ಎಸ್.ಐ.ಪ್ರಸನ್ನ ಅವರು ಪರಿಶೀಲನೆ ನಡೆಸಿ ಸಾವಿನ ಬಗ್ಗೆ ಸಂಶಯವಿರುವುದರಿಂದ ಈ ಪ್ರಕರಣವನ್ನು ಸಂಶಯಾಸ್ಪದ ಸಾವು ಎಂದು ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಈ ಸಾವಿನ ಬಗ್ಗೆ ವೈಜ್ಞಾನಿಕ ತನಿಖೆ ಮುಂದುವರಿದಿದೆ. ವೈದ್ಯರ ವರದಿ ಬಳಿಕ ಪ್ರಕರಣದ ಕುರಿತು ಸ್ಪಷ್ಟವಾದ ಚಿತ್ರಣ ಸಿಗಲಿದೆ.