Sunday, April 14, 2024

ಪುಣಚ: ಎಸ್.ಡಿ.ಪಿ.ಐಯಿಂದ ರಕ್ತದಾನ ಶಿಬಿರ-ಪಕ್ಷದ ಸ್ಥಾಪಕ ದಿನಾಚರಣೆ

ವಿಟ್ಲ: ಎಸ್‌ಡಿಪಿಐ ಪುಣಚ ವಲಯ ಸಮಿತಿ ವತಿಯಿಂದ ಪಕ್ಷದ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಹಾಗೂ ರಕ್ತದಾನ ಶಿಬಿರ ನಡೆಯಿತು.

ಎಸ್‌ಡಿಪಿಐ ಪುಣಚ ವಲಯಾಧ್ಯಕ್ಷ ಶಾಫಿ ಮಾಳಿಗೆ ಮತ್ತು ಹಿರಿಯರಾದ ಅಬೂಬಕ್ಕರ್ ಹಾಜಿ ಕುಟ್ಟಿತಡ್ಕ ಅವರು ಧ್ವಜಾರೋಹಣ ನಡೆಸಿದರು. ಪುಣಚ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೬೨ ಕಾರ್ಯಕರ್ತರು ರಕ್ತದಾನ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಮನೆಲಾ ಚರ್ಚ್‌ನ ಉಪಾಧ್ಯಕ್ಷ ಸಿರಿಲ್ ಪೆರಾವೋ, ಹಿರಿಯರಾದ ಇಸ್ಮಾಯಿಲ್ ಹಾಜಿ ಪೈಸಾರಿ, ವಿಟ್ಲ ಪಿ.ಎಫ್.ಐ. ಡಿವಿಷನ್ ಕಾರ್ಯದರ್ಶಿ ನಝೀರ್ ಪುಣಚ ಭಾಗವಹಿಸಿದ್ದರು. ಶಾಫಿ ಮಾಳಿಗೆ ಅಧ್ಯಕ್ಷತೆ ವಹಿಸಿದ್ದರು.
ರಕ್ತದಾನ ಶಿಬಿರದಲ್ಲಿ, ಉಜ್ರುಪಾದೆ ಜಮಾತಿನ ಅಧ್ಯಕ್ಷ ಎನ್. ಪಿ. ಇಸ್ಮಾಯಿಲ್ ನಾಟೆಕಲ್, ಹಿರಿಯರಾದ ರವೀಂದ್ರ ಶೆಟ್ಟಿ, ಸದಾನಂದ ರೈ, ಎಂ.ಎಸ್. ಅಬ್ದುಲ್ಲಾ, ಬಲ್ನಾಡು ಗ್ರಾಮದ ಸಮಿತಿ ಅಧ್ಯಕ್ಷರಾದ ಹೆಚ್.ಅಶ್ರಫ್ ಹಸಂತಡ್ಕ, ಪುಣಚ ಗ್ರಾಮದ ಸಮಿತಿ ಆಧ್ಯಕ್ಷರಾದ ಬದ್ರುದ್ದೀನ್, ಕಾರ್ಯದರ್ಶಿಗಳಾದ ಜಬ್ಬಾರ್ ಆಲಂತಡ್ಕ, ಸಹದ್ ಕಲ್ಲಾಜೆ, ವಿಟ್ಲ ವಲಯ ಸಮಿತಿ ಅಧ್ಯಕ್ಷ ರಹೀಂ, ಪಿ.ಎಫ್.ಐ. ವಿಟ್ಲ ಡಿವಿಷನ್ ಅಧ್ಯಕ್ಷ ಶಾಕಿರ್ ಅಳಕೆಮಜಲು, ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ವಲಯ ಸದಸ್ಯ ಹನೀಫ್ ಪೈಸಾರಿ, ಕೇಪು ಗ್ರಾಮ ಸಮಿತಿ ಅಧ್ಯಕ್ಷ ನಝೀರ್ ಅಜ್ಜಿನಡ್ಕ, ಕಾರ್ಯದರ್ಶಿ ತಮ್ಕಿನ್ ಅಲಿ ಸಿಲ್ಮಿ, ಅಳಿಕೆ ಗ್ರಾಮ ಸಮಿತಿ ಕಾರ್ಯದರ್ಶಿ ಸಾಹಿಲ್, ಪೆರುವಾಯಿ ಗ್ರಾಮ ಸಮಿತಿ ಪದಾಧಿಕಾರಿಗಳಾದ ಅನ್ವರ್ ಪೆರುವಾಯಿ, ರಿಯಾಝ್ , ಪುಣಚ ವಲಯ ಕಾರ್ಯದರ್ಶಿ ಎಂ.ಕೆ ಮುನೀರ್, ಹಿರಿಯ ಕಾರ್ಯಕರ್ತರಾದ ಕಮರುದ್ದೀನ್ ಪರಿಯಾಲ್, ನಿಜಾಮ್ ಪಾಲಸ್ತಡ್ಕ, ಲತೀಫ್ ಕುಟ್ಟಿತಡ್ಕ, ಸಿರಾಜ್, ಯಾಕೂಬ್, ಅಝೀಝ್ ಕೆ. ಪಿ, ಝಿಯಾದ್, ಹನೀಫ್ ಕಲ್ಲಾಜೆ ಉಪಸ್ಥಿತರಿದ್ದರು. ಎಂ.ಕೆ ಮುನೀರ್ ಕಾರ್ಯಕ್ರಮ ನಿರೂಪಿಸಿದರು.

,

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಆಟವಾಡುತ್ತಾ ಜಮೀನಿನಲ್ಲಿದ್ದ ಬೋರ್‌ವೆಲ್​ಗೆ ಬಿದ್ದ 6 ವರ್ಷದ ಬಾಲಕ

ಆರು ವರ್ಷದ ಬಾಲಕನೋರ್ವ ತೆರೆದ ಬೋರ್​ವೆಲ್ ಒಳಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ. ಬೋರ್​ವೆಲ್​ಗೆ ಬಿದ್ದ ಬಾಲಕನನ್ನು ರೇವಾ ಜಿಲ್ಲೆಯ ಜಾನೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಕಾ ಗ್ರಾಮದ ಮಯಾಂಕ್ ಎಂದು...

ಇಂದಿನಿಂದ ಅಂಚೆ ಮತದಾನ ಪ್ರಾರಂಭ

ಇಂದಿನಿಂದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಂದ ಅಂಚೆ ಮತದಾನ ನಡೆಯಲಿದೆ. ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಇಂದಿನಿಂದ ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶವಿದೆ. ಬೆಂಗಳೂರು...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.