ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯ ಪಲಿಕೆ ಎಂಬಲ್ಲಿ ಮರದ ಬುಡವೊಂದು ರಸ್ತೆಗೆ ಮಗುಚಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಮಾಣಿ ಸಮೀಪದ ಪಲಿಕೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ದ್ದ ಕಡಿದು ಉಳಿದ ಮರದ ಕಾಂಡವೊಂದು ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗೆ ಉರುಳಿಬಿದ್ದಿದೆ.
ರಾತ್ರಿ ವೇಳೆ ಈ ಕಾಂಡ ರಸ್ತೆಗೆ ಉರುಳಿಬಿದ್ದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಶೀಘ್ರವಾಗಿ ರಸ್ತೆಯಿಂದ ಮರದ ಕಾಂಡವನ್ನು ತೆರವು ಗೊಳಿಸದಿದ್ದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಗಳಿವೆ.
ಸಂಬಂಧಿಸಿದ ಇಲಾಖೆ ಗಮನಹರಿಸಿ ತೆರವುಗೊಳಿಸುವಂತೆ ಸ್ಥಳೀಯರ ಆಗ್ರಹವಾಗಿದೆ.