Thursday, October 19, 2023

ವಿದ್ಯುತ್ ಶಾಕ್ ಗೆ ರತ್ನವರ್ಮ ಜೈನ್ ಬಲಿ

Must read

ಕಾರ್ಕಳ: ಕಾರ್ಕಳ ಸಮೀಪದ ಮುಂಡ್ಲಿಯ ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ವಿದ್ಯುತ್ ಆಘಾತದಿಂದ ಕಂಬಳ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕಂಬಳ ಪ್ರೇಮಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸಾಂತ್ರಬೆಟ್ಟು ರತ್ನ ವರ್ಮ ಜೈನ್(48) ವಿದ್ಯುತ್ ಆಘಾತದಿಂದ ಮೃತಪಟ್ಟ ವ್ಯಕ್ತಿ.
ಕಾರ್ಕಳದ ತಂಪು ಪಾನೀಯ ಯೊಂದರಲ್ಲಿ ಜನರೇಟರ್ ಆಫ್‌ ಮಾಡುವ ವೇಳೆ ಇವರ ಮೈಮೇಲೆ ವಿದ್ಯುತ್ ಹರಿದು ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ವರ ಪ್ರಾಥಮಿಕ ವರದಿ ತಿಳಿಸಿದೆ.
ರತ್ನವರ್ಮ ಜೈನ್ ಅವರು ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ದ ಕಂಬಳ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಲ್ಲದೆ ಹಲವು ಸಾಧನೆಗಳನ್ನು ಮಾಡಿ ಗುರುತಿಸಲ್ಪಟ್ಟಿದ್ದರು.
ಇವರ ಅಕಾಲಿಕ ಮರಣ ಕಂಬಳ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

More articles

Latest article